ಕೊವಿಡ್–19, ಲಾಕ್ಡೌನ್ ನಿರ್ಬಂಧ ಇದ್ದಾಗ ಅಂಗಡಿ, ಹೊಟೇಲ್ ಗಳು ಮುಚ್ಚಿದ್ದು ತ್ಯಾಜ್ಯ ಸಮಸ್ಯೆಯಿಲ್ಲದೆ ಪರಿಸರ ಸ್ವಚ್ಛವಾಗಿತ್ತು. ಇದೀಗ ಲಾಕ್ಡೌನ್ ಸಡಿಲಗೊಂಡ ಬೆನ್ನಲ್ಲೇ ಕಸದ ರಾಶಿ, ಮದ್ಯದ ಬಾಟಲಿಗಳನ್ನು ಸುರಿಯಲಾಗುತ್ತಿದೆ. ಕಾಜೂರು ಹೊಳೆ ಹರಿದು ಹೇಮಾವತಿ ನದಿಯನ್ನು ಸೇರುತ್ತದೆ. ಜೋರಾಗಿ ಮಳೆಯಾದರೆ ತ್ಯಾಜ್ಯವೂ ನದಿ ಸೇರುತ್ತದೆ ಎಂದು ಕಾಜೂರು, ದೊಡ್ಡಕೊಳತ್ತೂರು, ಎಡೆಹಳ್ಳಿ ಗ್ರಾಮಸ್ಥರು ಹೇಳುತ್ತಾರೆ.