‘ಇಂದಿನ ಪರಿಸ್ಥಿತಿಯಲ್ಲಿ ಯೇಸು, ಅಲ್ಲಾ, ಹರಿ ಎಲ್ಲಾ ಒಂದೇ ಎಂದು ತೋರಿಸಲು ಚಿಂತನಾ ತತ್ವಗಳನ್ನು ಸಮಾಜದ ಮುಂದಿಡಬೇಕು. ಅಸಮಾನತೆಯ ಸಮಾಜದಲ್ಲಿ ಹುಟ್ಟಿದ ಕನಕದಾಸರು ಸಂಗೀತ, ಸಾಹಿತ್ಯ, ಕೀರ್ತನೆಗಳ ಮೂಲಕ ಸಾಮಾಜಿಕ ಸುಧಾರಣೆಗೆ ನಾಂದಿ ಹಾಡಿದ್ದರು. ನಾಟಕಕಾರ, ಕವಿಯಾಗಿದ್ದ ಅಪ್ಪಚ್ಚ ಕವಿ ಕೊಡವ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಕೊಡವ ಸಾಹಿತ್ಯ ಇತರ ಯಾವುದೇ ಸಾಹಿತ್ಯಕ್ಕೂ ಕಡಿಮೆ ಇಲ್ಲ. ಆದರೆ, ನಮಗೆ ಅದರ ಮಹತ್ವದ ಬಗ್ಗೆ ಅರಿವಿಲ್ಲ’ ಎಂದರು.