ಮಡಿಕೇರಿ: ಕೊಡಗು ಜಿಲ್ಲೆಯಲ್ಲಿಯೂ ಉಗ್ರರ ಚಟುವಟಿಕೆಗಳಿಗೆ ಆಸ್ಪದ ನೀಡುವಂತಹ ಪ್ರದೇಶಗಳಿವೆ. ಪೊಲೀಸರು ಇಲ್ಲೆಲ್ಲ ಹೆಚ್ಚಿನ ನಿಗಾ ವಹಿಸಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಎಂದು ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.
ಇಲ್ಲಿ ಉತ್ಸವಗಳು, ವಾರ್ಷಿಕೋತ್ಸವಗಳು ನಡೆಯುತ್ತಿವೆ. ಉಗ್ರರ ಕುಕೃತ್ಯಗಳೂ ನಡೆಯುವ ಸಾಧ್ಯತೆಗಳಿವೆ. ಪೊಲೀಸರು ಭದ್ರತೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಬೇರೆ ಧರ್ಮದರಿಂದ ಬೆದರಿಕೆ ಇದೆ ಎಂದು ಹಿಂದೂಗಳೇ ಜಾಗೃತರಾಗಿ ದೇವರ ಉತ್ಸವದಲ್ಲಿ ಅನ್ಯಕೋಮಿನವರಿಗೆ ನಿರ್ಬಂಧ ಹೇರುತ್ತಿದ್ದಾರೆ ಎಂದರು.