ತಾರತಮ್ಯ ಬೇಡ: ಶಿವಮೊಗ್ಗದಲ್ಲಿ ಇತ್ತೀಚೆಗೆ ಹತ್ಯೆಯಾದ ಸಂಘ ಪರಿವಾರದ ಯುವಕನ ಕುಟುಂಬಕ್ಕೆ ಸರ್ಕಾರವು ₹25 ಲಕ್ಷ ಪರಿಹಾರವಾಗಿ ನೀಡಿದೆ. ಆದರೆ, ಇದೇ ರೀತಿ ಮೃತಪಟ್ಟ ಇತರರಿಗೆ ಈ ಸೌಲಭ್ಯ ನೀಡದೆ ತಾರತಮ್ಯ ತೋರುತ್ತಿದೆ. ದಕ್ಷಿಣ ಕನ್ನಡದಲ್ಲಿ ದಿನೇಶ್ ಹಾಗೂ ನೆಲಮಂಗಲದಲ್ಲಿ ಸಮೀರ್ ಎಂಬಾತನ ಹತ್ಯೆಯಾಗಿದ್ದು, ಇವರ ಕುಟುಂಬಕ್ಕೂ ತಲಾ ₹25 ಲಕ್ಷ ಪರಿಹಾರವನ್ನು ಸರ್ಕಾರ ನೀಡಲಿ’ ಎಂದು ಆಗ್ರಹಿಸಿದರು.