<p><strong>ಮಡಿಕೇರಿ:</strong> ಒಂದೆಡೆ ಕೊಡಗಿನಲ್ಲಿ ಕಾಫಿ ಹೂ ಅರಳಲು ವೇದಿಕೆ ಸಿದ್ಧವಾಗುತ್ತಿದೆ. ಮತ್ತೊಂದೆಡೆ, ತಾಪಮಾನ ಹೆಚ್ಚಾಗುತ್ತಿದೆ. ಮಗದೊಂದು ಕಡೆ ಸಾಮಾನ್ಯಕ್ಕಿಂತಲೂ ಈ ಬಾರಿ ಅಧಿಕ ತಾಪಮಾನ ದಾಖಲಾಗಲಿದೆ’ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಕಾಫಿ ಬೆಳೆಗಾರರ ಚಿಂತೆ ಹೆಚ್ಚಿಸಿದೆ.</p>.<p>ಶನಿವಾರಸಂತೆ ಭಾಗ ಸೇರಿದಂತೆ ಕೆಲವೆಡೆ ಹೂಮಳೆ ಸುರಿದಿತ್ತು. ಇದರಿಂದ ಆ ಭಾಗದಲ್ಲಿ ಕಾಫಿ ಮೊಗ್ಗಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಹೂವಾಗಿ ಅರಳಲಿದೆ. ಮಳೆಯಾಗಿರದ ಕಡೆ ಬೆಳೆಗಾರರೇ ಕೃತಕವಾಗಿ ನೀರು ಹಾಯಿಸಿದ್ದರು. ಇದರಿಂದಲೂ ಹಲವೆಡೆ ಕಾಫಿ ಹೂ ಅರಳುವ ಸಮಯ ಸಮೀಪಿಸಿದೆ. ಇಂತಹ ಹೊತ್ತಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗುವ ಹವಾಮಾನ ಇಲಾಖೆಯ ಮುನ್ಸೂಚನೆ ಬೆಳೆಗಾರರ ನಿದ್ದೆಗೆಡಿಸಿದೆ.</p>.<p>ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ಮಂಜಿನ ನಗರಿ ಮಡಿಕೇರಿ ಸಹ ಬಿಸಿಲ ನಗರಿಯಾಗುತ್ತಿದೆ. ಫೆಬ್ರುವರಿಯಲ್ಲೇ ಕೊಡಗಿನ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದೆ. ಫೆ.20ರಂದು 33.14 ಡಿಗ್ರಿ ಸೆಲ್ಸಿಯಸ್ವರೆಗೂ ಗರಿಷ್ಠ ಉಷ್ಣಾಂಶ ತಲುಪಿತ್ತು. ಆನಂತರ, ಮೋಡ ಕವಿದ ವಾತಾವರಣ ಮೂಡಿ ಕೆಲವೆಡೆ ಹಗುರ ಮಳೆಯಾಗಿದ್ದರಿಂದ ತಾಪಮಾನ ಮತ್ತಷ್ಟು ಹೆಚ್ಚಲಿಲ್ಲ.</p>.<p>ಆದರೆ, ಈಗ ಮಾರ್ಚ್ ತಿಂಗಳ ಮೊದಲ ವಾರದಿಂದಲೇ ತಾಪಮಾನ 30ರಿಂದ 32 ಡಿಗ್ರಿ ಸೆಲ್ಸಿಯಸ್ವರೆಗೆ ಇದೆ. ಬಿಸಿಲಿನ ಝಳವೂ ಹೆಚ್ಚುತ್ತಿದೆ. </p>.<p>ಅತ್ತ ಭಾರತ ಹವಾಮಾನ ಇಲಾಖೆಯೂ ತಾಪಮಾನ ಕಡಿಮೆಯಾಗುವ ಮುನ್ಸೂಚನೆ ನೀಡಿಲ್ಲ. ಬೇಸಿಗೆಯಲ್ಲಿರುವ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ತಿಂಗಳೇ ಮುಂಬರುವ ದಿನಗಳಲ್ಲಿ 34–35 ಡಿಗ್ರಿ ಸೆಲ್ಸಿಯಸ್ವರೆಗೂ ಉಷ್ಣಾಂಶ ದಾಖಲಾಗಲಿದೆ ಎಂದು ಹೇಳಿದೆ. ಹೀಗಾಗಿ, ಮುಂಬರುವ ದಿನಗಳು ನಿಶ್ಚಿತವಾಗಿಯೂ ಬಿಸಿ ಮತ್ತು ಸೆಖೆಯ ದಿನಗಳೇ ಆಗುವುದು ಖಚಿತ ಎನಿಸಿದೆ.</p>.<p>ಸದ್ಯಕ್ಕೆ ಮಳೆಯ ಸಂಭವ ಇಲ್ಲ: ಬಂಗಾಳಕೊಲ್ಲಿಯ ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ಮಧ್ಯಮ ಸ್ತರದ ಗಾಳಿಯ ತಿರುಗುವಿಕೆ ಉಂಟಾಗಿದ್ದರೂ ಸದ್ಯಕ್ಕೆ ಮಳೆಯ ಸಂಭವ ಇಲ್ಲ ಎಂದು ಮೈಸೂರಿನ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್ ಕುಮಾರ್ ಹೇಳುತ್ತಾರೆ.</p>.<p>‘ಈ ಗಾಳಿಯ ತಿರುಗುವಿಕೆಯು ಕೇವಲ ಮೋಡ ಕವಿದ ವಾತಾವರಣಕ್ಕಷ್ಟೇ ಸೀಮಿತವಾಗುವ ಸಂಭವ ಇದೆ’ ಎಂದು ತಿಳಿಸುತ್ತಾರೆ.</p>.<p><strong>ನೀರು ಹಾಯಿಸುವುದು ಉತ್ತಮ</strong> </p><p>‘ಕೆಲವು ಭಾಗಗಳಲ್ಲಿ ಕಾಫಿ ಹೂ ಸದ್ಯದಲ್ಲೇ ಅರಳಲಿದೆ ಮತ್ತೆ ಕೆಲವೆಡೆ ಈಗಾಗಲೇ ಅರಳಿದೆ. ಆದರೆ ಉಷ್ಣಾಂಶ ಏರುಗತಿಯಲ್ಲಿದೆ. ಮಾರ್ಚ್ ಮೊದಲ ವಾರದಲ್ಲೇ 33 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಮಳೆ ಬರುವ ಲಕ್ಷಣಗಳು ಸದ್ಯಕ್ಕೆ ಗೋಚರವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಫಿ ಹೂ ಅರಳಿದ ನಂತರ ಬ್ಯಾಕಿಂಗ್ ನೀರು ಕೊಡಲೇ ಬೇಕು. ಆ ನೀರನ್ನು ಕೊಟ್ಟ ನಂತರವೂ ಸ್ವಲ್ಪ ದಿನ ಬಿಟ್ಟು ನೀರು ಹಾಯಿಸುವುದು ಉತ್ತಮ’ ಎಂದು ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p> <strong>ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚು</strong></p><p> ಮೈಸೂರಿನ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್ ಕುಮಾರ್ ಮಾತನಾಡಿ ‘ಮುಂಬರುವ ದಿನಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ’ ಎಂದು ಹೇಳಿದರು. ಕೇವಲ ಕೊಡಗು ಮಾತ್ರವಲ್ಲ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಾರ್ಚ್ನಿಂದ ಮೇವರೆಗೆ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ದಾಖಲಾಗುವ ಸಾಧ್ಯತೆಗಳಿವೆ. ಈ ವೇಳೆ ಕನಿಷ್ಠ ತಾಪಮಾನವೂ ಹೆಚ್ಚಾಗುವ ಸಂಭವ ಇದೆ ಎಂದು ತಿಳಿಸಿದರು. ಕೇವಲ ಬಿಸಿಲು ಉಷ್ಣಾಂಶ ಮಾತ್ರವಲ್ಲ ಬಿಸಿಗಾಳಿ ಬೀಸುವ ದಿನಗಳ ಸಂಖ್ಯೆಯೂ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಒಂದೆಡೆ ಕೊಡಗಿನಲ್ಲಿ ಕಾಫಿ ಹೂ ಅರಳಲು ವೇದಿಕೆ ಸಿದ್ಧವಾಗುತ್ತಿದೆ. ಮತ್ತೊಂದೆಡೆ, ತಾಪಮಾನ ಹೆಚ್ಚಾಗುತ್ತಿದೆ. ಮಗದೊಂದು ಕಡೆ ಸಾಮಾನ್ಯಕ್ಕಿಂತಲೂ ಈ ಬಾರಿ ಅಧಿಕ ತಾಪಮಾನ ದಾಖಲಾಗಲಿದೆ’ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಕಾಫಿ ಬೆಳೆಗಾರರ ಚಿಂತೆ ಹೆಚ್ಚಿಸಿದೆ.</p>.<p>ಶನಿವಾರಸಂತೆ ಭಾಗ ಸೇರಿದಂತೆ ಕೆಲವೆಡೆ ಹೂಮಳೆ ಸುರಿದಿತ್ತು. ಇದರಿಂದ ಆ ಭಾಗದಲ್ಲಿ ಕಾಫಿ ಮೊಗ್ಗಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ಹೂವಾಗಿ ಅರಳಲಿದೆ. ಮಳೆಯಾಗಿರದ ಕಡೆ ಬೆಳೆಗಾರರೇ ಕೃತಕವಾಗಿ ನೀರು ಹಾಯಿಸಿದ್ದರು. ಇದರಿಂದಲೂ ಹಲವೆಡೆ ಕಾಫಿ ಹೂ ಅರಳುವ ಸಮಯ ಸಮೀಪಿಸಿದೆ. ಇಂತಹ ಹೊತ್ತಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗುವ ಹವಾಮಾನ ಇಲಾಖೆಯ ಮುನ್ಸೂಚನೆ ಬೆಳೆಗಾರರ ನಿದ್ದೆಗೆಡಿಸಿದೆ.</p>.<p>ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದೆ. ಮಂಜಿನ ನಗರಿ ಮಡಿಕೇರಿ ಸಹ ಬಿಸಿಲ ನಗರಿಯಾಗುತ್ತಿದೆ. ಫೆಬ್ರುವರಿಯಲ್ಲೇ ಕೊಡಗಿನ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದೆ. ಫೆ.20ರಂದು 33.14 ಡಿಗ್ರಿ ಸೆಲ್ಸಿಯಸ್ವರೆಗೂ ಗರಿಷ್ಠ ಉಷ್ಣಾಂಶ ತಲುಪಿತ್ತು. ಆನಂತರ, ಮೋಡ ಕವಿದ ವಾತಾವರಣ ಮೂಡಿ ಕೆಲವೆಡೆ ಹಗುರ ಮಳೆಯಾಗಿದ್ದರಿಂದ ತಾಪಮಾನ ಮತ್ತಷ್ಟು ಹೆಚ್ಚಲಿಲ್ಲ.</p>.<p>ಆದರೆ, ಈಗ ಮಾರ್ಚ್ ತಿಂಗಳ ಮೊದಲ ವಾರದಿಂದಲೇ ತಾಪಮಾನ 30ರಿಂದ 32 ಡಿಗ್ರಿ ಸೆಲ್ಸಿಯಸ್ವರೆಗೆ ಇದೆ. ಬಿಸಿಲಿನ ಝಳವೂ ಹೆಚ್ಚುತ್ತಿದೆ. </p>.<p>ಅತ್ತ ಭಾರತ ಹವಾಮಾನ ಇಲಾಖೆಯೂ ತಾಪಮಾನ ಕಡಿಮೆಯಾಗುವ ಮುನ್ಸೂಚನೆ ನೀಡಿಲ್ಲ. ಬೇಸಿಗೆಯಲ್ಲಿರುವ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ತಿಂಗಳೇ ಮುಂಬರುವ ದಿನಗಳಲ್ಲಿ 34–35 ಡಿಗ್ರಿ ಸೆಲ್ಸಿಯಸ್ವರೆಗೂ ಉಷ್ಣಾಂಶ ದಾಖಲಾಗಲಿದೆ ಎಂದು ಹೇಳಿದೆ. ಹೀಗಾಗಿ, ಮುಂಬರುವ ದಿನಗಳು ನಿಶ್ಚಿತವಾಗಿಯೂ ಬಿಸಿ ಮತ್ತು ಸೆಖೆಯ ದಿನಗಳೇ ಆಗುವುದು ಖಚಿತ ಎನಿಸಿದೆ.</p>.<p>ಸದ್ಯಕ್ಕೆ ಮಳೆಯ ಸಂಭವ ಇಲ್ಲ: ಬಂಗಾಳಕೊಲ್ಲಿಯ ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ಮಧ್ಯಮ ಸ್ತರದ ಗಾಳಿಯ ತಿರುಗುವಿಕೆ ಉಂಟಾಗಿದ್ದರೂ ಸದ್ಯಕ್ಕೆ ಮಳೆಯ ಸಂಭವ ಇಲ್ಲ ಎಂದು ಮೈಸೂರಿನ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್ ಕುಮಾರ್ ಹೇಳುತ್ತಾರೆ.</p>.<p>‘ಈ ಗಾಳಿಯ ತಿರುಗುವಿಕೆಯು ಕೇವಲ ಮೋಡ ಕವಿದ ವಾತಾವರಣಕ್ಕಷ್ಟೇ ಸೀಮಿತವಾಗುವ ಸಂಭವ ಇದೆ’ ಎಂದು ತಿಳಿಸುತ್ತಾರೆ.</p>.<p><strong>ನೀರು ಹಾಯಿಸುವುದು ಉತ್ತಮ</strong> </p><p>‘ಕೆಲವು ಭಾಗಗಳಲ್ಲಿ ಕಾಫಿ ಹೂ ಸದ್ಯದಲ್ಲೇ ಅರಳಲಿದೆ ಮತ್ತೆ ಕೆಲವೆಡೆ ಈಗಾಗಲೇ ಅರಳಿದೆ. ಆದರೆ ಉಷ್ಣಾಂಶ ಏರುಗತಿಯಲ್ಲಿದೆ. ಮಾರ್ಚ್ ಮೊದಲ ವಾರದಲ್ಲೇ 33 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಮಳೆ ಬರುವ ಲಕ್ಷಣಗಳು ಸದ್ಯಕ್ಕೆ ಗೋಚರವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಫಿ ಹೂ ಅರಳಿದ ನಂತರ ಬ್ಯಾಕಿಂಗ್ ನೀರು ಕೊಡಲೇ ಬೇಕು. ಆ ನೀರನ್ನು ಕೊಟ್ಟ ನಂತರವೂ ಸ್ವಲ್ಪ ದಿನ ಬಿಟ್ಟು ನೀರು ಹಾಯಿಸುವುದು ಉತ್ತಮ’ ಎಂದು ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p> <strong>ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚು</strong></p><p> ಮೈಸೂರಿನ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್ ಕುಮಾರ್ ಮಾತನಾಡಿ ‘ಮುಂಬರುವ ದಿನಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ಉಷ್ಣಾಂಶ ದಾಖಲಾಗಲಿದೆ’ ಎಂದು ಹೇಳಿದರು. ಕೇವಲ ಕೊಡಗು ಮಾತ್ರವಲ್ಲ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಾರ್ಚ್ನಿಂದ ಮೇವರೆಗೆ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ದಾಖಲಾಗುವ ಸಾಧ್ಯತೆಗಳಿವೆ. ಈ ವೇಳೆ ಕನಿಷ್ಠ ತಾಪಮಾನವೂ ಹೆಚ್ಚಾಗುವ ಸಂಭವ ಇದೆ ಎಂದು ತಿಳಿಸಿದರು. ಕೇವಲ ಬಿಸಿಲು ಉಷ್ಣಾಂಶ ಮಾತ್ರವಲ್ಲ ಬಿಸಿಗಾಳಿ ಬೀಸುವ ದಿನಗಳ ಸಂಖ್ಯೆಯೂ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>