ಜಿಲ್ಲೆಯ 79 ಪ್ರದೇಶಗಳು ಈ ವರ್ಷ ಭೀಕರ ಪ್ರವಾಹ ಎದುರಿಸಿದ್ದವು. ನದಿಯಲ್ಲಿ ನೀರು ಏರುತ್ತಿದ್ದಂತೆಯೇ ತೊಟ್ಟ ಬಟ್ಟೆಯಲ್ಲಿಯೇ ಎಷ್ಟೋ ಮಂದಿ ಮನೆ ಖಾಲಿ ಮಾಡಿದ್ದರು. ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಪರಂಬು ಪೈಸಾರಿ, ಹೊದವಾಡ, ಕೊಂಡಂಗೇರಿ, ಕುಂಬಾರಗುಂಡಿ, ಬೆಟ್ಟದಕಾಡು, ವಾಲ್ನೂರು– ತ್ಯಾಗತ್ತೂರು, ಕಾನೂರು, ಬೆಕ್ಕೆಸೊಡ್ಲೂರು, ಅರ್ವತ್ತೊಕ್ಲು, ನಿಟ್ಟೂರು, ಕದನೂರು, ಬಿರುನಾಣಿ, ಬೇತ್ರಿ ಭಾಗದಲ್ಲಿ ಹಲವು ಮನೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.