<p>ಸುಂಟಿಕೊಪ್ಪ: ಕೊಡಗು ಜಿಲ್ಲೆಯ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬರದ ಛಾಯೆ ಆವರಿಸಿದೆ. ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸನ್ನಿವೇಶ ಸನ್ನಿಹಿತವಾಗುತ್ತಿದೆ.</p>.<p>ಕಾಫಿ ತೋಟದ ನಡುವೆ ಹರಿಯುತ್ತಿದ್ದ ಸಣ್ಣ ಪುಟ್ಟ ತೊರೆಗಳು ಒಣಗಿವೆ. ಹಾರಂಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಮತ್ತೊಂದೆಡೆ ಹಿನ್ನೀರು ಪ್ರದೇಶವಾದ ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಯಲ್ಲಿಯೂ ನೀರಿನ ಪ್ರಮಾಣ ಇಳಿಕೆಯಾಗಿದೆ.</p>.<p>ಬಿಸಿಲಿನ ತಾಪಕ್ಕೆ ಹುಲ್ಲು, ಗಿಡಗಳು ಒಣಗಿ ಹೋಗಿವೆ. ದನ ಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ. 2018ರ ಭೂಕುಸಿತದಿಂದ ಹೊಳೆಯನ್ನು ಆವರಿಸಿದ್ದ ಮಣ್ಣಿನಿಂದಾಗಿ ಮಳೆಗಾಲಕ್ಕೆ ತಿಂಗಳಿರುವಾಗಲೇ ನೀರು ಮಾಯವಾಗುತ್ತಿದೆ.</p>.<p>ಹೊಳೆಯನ್ನು ಅವಲಂಬಿಸಿರುವ ರೈತರು ತಮ್ಮ ತೋಟಗಳಿಗೆ ನೀರು ಹರಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ.</p>.<p>ಇದಲ್ಲದೇ, ಹಟ್ಟಿಹೊಳೆ, ಮಾದಾಪುರದ ಹೊಳೆಗಳಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಈ ಭಾಗದಲ್ಲಿ ಭಾರಿ ಬಿರುಸಿನ ಮಳೆ ಈ ವರ್ಷ ಸುರಿದೇ ಇಲ್ಲ. ಹೊಳೆ ತುಂಬಿ ಹರಿಯುವಷ್ಟು ಮಳೆಯೂ ಆಗಿಲ್ಲ. ಇದರಿಂದ ಯಾವಾಗಲೂ ತಂಪಾಗಿರುತ್ತಿದ್ದ ಸುಂಟಿಕೊಪ್ಪ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಇದೀಗ ಸೆಖೆಯ ವಾತಾವರಣ ಮೂಡಿದೆ.</p>.<p>ಕಾಫಿ ತೋಟಗಳಲ್ಲಿ ಹೀಗಾಗಲೇ ಕೃತಕ ನೀರಾವರಿ ವ್ಯವಸ್ಥೆಯನ್ನು ಬೆಳೆಗಾರರು ಅವಲಂಬಿಸಿದ್ದಾರೆ. ಎಷ್ಟೇ ನೀರು ಹರಿಸಿದರೂ ಬಿಸಿಲ ಬೇಗೆ ಹೇಗಿದೆ ಎಂದರೆ ಆ ನೀರೆಲ್ಲವೂ ಕೆಲ ದಿನಗಳಲ್ಲೇ ಆವಿಯಾಗುತ್ತಿದೆ. ಕೆಲವೆಡೆ ತೋಟಗಳಲ್ಲಿರುವ ಕೆರೆಯ ನೀರು ಸಹ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಇದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.</p>.<p>‘ಗರಗಂದೂರು ವ್ಯಾಪ್ತಿಯ ವಿವಿಧ ಕಾಲೊನಿಗಳಲ್ಲಿ ಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಜನ ತತ್ತರಿಸಿಹೋಗಿದ್ದಾರೆ’ ಎನ್ನುತ್ತಾರೆ ಗರಗಂದೂರು ನಿವಾಸಿ ದಿನೇಶ್.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-51-1260798829</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಂಟಿಕೊಪ್ಪ: ಕೊಡಗು ಜಿಲ್ಲೆಯ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬರದ ಛಾಯೆ ಆವರಿಸಿದೆ. ಕೃಷಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸನ್ನಿವೇಶ ಸನ್ನಿಹಿತವಾಗುತ್ತಿದೆ.</p>.<p>ಕಾಫಿ ತೋಟದ ನಡುವೆ ಹರಿಯುತ್ತಿದ್ದ ಸಣ್ಣ ಪುಟ್ಟ ತೊರೆಗಳು ಒಣಗಿವೆ. ಹಾರಂಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಮತ್ತೊಂದೆಡೆ ಹಿನ್ನೀರು ಪ್ರದೇಶವಾದ ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಯಲ್ಲಿಯೂ ನೀರಿನ ಪ್ರಮಾಣ ಇಳಿಕೆಯಾಗಿದೆ.</p>.<p>ಬಿಸಿಲಿನ ತಾಪಕ್ಕೆ ಹುಲ್ಲು, ಗಿಡಗಳು ಒಣಗಿ ಹೋಗಿವೆ. ದನ ಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ. 2018ರ ಭೂಕುಸಿತದಿಂದ ಹೊಳೆಯನ್ನು ಆವರಿಸಿದ್ದ ಮಣ್ಣಿನಿಂದಾಗಿ ಮಳೆಗಾಲಕ್ಕೆ ತಿಂಗಳಿರುವಾಗಲೇ ನೀರು ಮಾಯವಾಗುತ್ತಿದೆ.</p>.<p>ಹೊಳೆಯನ್ನು ಅವಲಂಬಿಸಿರುವ ರೈತರು ತಮ್ಮ ತೋಟಗಳಿಗೆ ನೀರು ಹರಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ.</p>.<p>ಇದಲ್ಲದೇ, ಹಟ್ಟಿಹೊಳೆ, ಮಾದಾಪುರದ ಹೊಳೆಗಳಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಈ ಭಾಗದಲ್ಲಿ ಭಾರಿ ಬಿರುಸಿನ ಮಳೆ ಈ ವರ್ಷ ಸುರಿದೇ ಇಲ್ಲ. ಹೊಳೆ ತುಂಬಿ ಹರಿಯುವಷ್ಟು ಮಳೆಯೂ ಆಗಿಲ್ಲ. ಇದರಿಂದ ಯಾವಾಗಲೂ ತಂಪಾಗಿರುತ್ತಿದ್ದ ಸುಂಟಿಕೊಪ್ಪ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಇದೀಗ ಸೆಖೆಯ ವಾತಾವರಣ ಮೂಡಿದೆ.</p>.<p>ಕಾಫಿ ತೋಟಗಳಲ್ಲಿ ಹೀಗಾಗಲೇ ಕೃತಕ ನೀರಾವರಿ ವ್ಯವಸ್ಥೆಯನ್ನು ಬೆಳೆಗಾರರು ಅವಲಂಬಿಸಿದ್ದಾರೆ. ಎಷ್ಟೇ ನೀರು ಹರಿಸಿದರೂ ಬಿಸಿಲ ಬೇಗೆ ಹೇಗಿದೆ ಎಂದರೆ ಆ ನೀರೆಲ್ಲವೂ ಕೆಲ ದಿನಗಳಲ್ಲೇ ಆವಿಯಾಗುತ್ತಿದೆ. ಕೆಲವೆಡೆ ತೋಟಗಳಲ್ಲಿರುವ ಕೆರೆಯ ನೀರು ಸಹ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಕೊಳವೆಬಾವಿಗಳಲ್ಲೂ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಇದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.</p>.<p>‘ಗರಗಂದೂರು ವ್ಯಾಪ್ತಿಯ ವಿವಿಧ ಕಾಲೊನಿಗಳಲ್ಲಿ ಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಜನ ತತ್ತರಿಸಿಹೋಗಿದ್ದಾರೆ’ ಎನ್ನುತ್ತಾರೆ ಗರಗಂದೂರು ನಿವಾಸಿ ದಿನೇಶ್.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-51-1260798829</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>