<p>ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಉತ್ಸವ ಮುಗಿದ ಮೇಲೂ ಗಿಡ ನೆಡುವ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಚೇನಂಡ ಹಾಕಿ ಉತ್ಸವದ ಕಾರ್ಯದರ್ಶಿ ಮಧು ಮಾದಯ್ಯ ಹೇಳಿದರು.</p>.<p>‘ಗೋಲಿಗೊಂದು ಗಿಡ’ ಎಂಬ ಅಭಿಯಾನದಡಿ 2,200ಕ್ಕೂ ಅಧಿಕ ಸಸಿಗಳನ್ನು ಜಿಲ್ಲೆಯ ವಿವಿಧೆಡೆ ನೆಡಲಾಗಿದೆ. 1,520 ಗೋಲುಗಳು ದಾಖಲಾಗಿವೆ. ದಾಖಲಾದ ಗೋಲಿಗಿಂತಲೂ ಅಧಿಕ ಗಿಡಗಳನ್ನು ನೆಡಲಾಗಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಗಿಡ ನೆಡಲು ಹಣ ಮೀಸಲಿರಿಸಿದ್ದೇವೆ. ಮುಂದೆ ನಶಿಸುವ ಹಂತದಲ್ಲಿರುವ ಕಾಡುಜಾತಿಯ ಹಣ್ಣು ಗಿಡಗಳನ್ನು ನೆಡಲು ಚಿಂತನೆ ನಡೆಸಿದ್ದೇವೆ’ ಎಂದರು.</p>.<p>ಸಮಿತಿಯ ಕಾರ್ಯಾಧ್ಯಕ್ಷ ದೀನಾ ಚೆಂಗಪ್ಪ ಮಾತನಾಡಿ, ‘ಈಗಾಗಲೇ ನೆಟ್ಟಿರುವ ಎಲ್ಲ ಗಿಡಗಳನ್ನು ಆಗಿದ್ದಾಂಗ್ಗೆ ನಾವು ವೀಕ್ಷಿಸುತ್ತಿದ್ದೇವೆ. ಅವುಗಳೆಲ್ಲವೂ ಉತ್ತಮವಾಗಿ ಬೆಳೆಯುತ್ತಿವೆ. ಮುಂದಿನ ದಿನಗಳಲ್ಲಿಯೂ ಆ ಗಿಡಗಳು ಮರಗಳಾಗುವವರೆಗೆ ಅವುಗಳ ಯೋಗಕ್ಷೇಮ ನೋಡಿಕೊಳ್ಳಲಾಗುವುದು’ ಎಂದರು.</p>.<p>ಸುಮಾರು 500ಕ್ಕೂ ಹೆಚ್ಚು ಜೇನುಪೆಟ್ಟಿಗೆಗಳನ್ನು ವಿತರಿಸಲಾಗಿದೆ. ಆ ಪೆಟ್ಟಿಗೆಗಳಿಗೆ ಜೇನುನೊಣಗಳ ಅಗತ್ಯ ಕಂಡು ಬಂದಲ್ಲಿ ಚೇನಂಡ ಹಾಕಿ ಸಮಿತಿಯು ಕೆಲವು ವ್ಯವಸ್ಥೆಗಳನ್ನು ಮಾಡಿದೆ. ಜೇನುನೊಣಗಳು ಬೇಕಾದ್ದಲ್ಲಿ ಸಮಿತಿಯುವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.</p>.<p>ಉತ್ಸವ ಸಮಿತಿ ಅಧ್ಯಕ್ಷ ಕಂಬಣಿ ಕರುಂಬಯ್ಯ, ವಕ್ತಾರ ಸುರೇಶ್ ನಾಣಯ್ಯ, ಸದಸ್ಯ ತಮ್ಮಿ ತಮ್ಮಯ್ಯ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-51-1804452973</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಉತ್ಸವ ಮುಗಿದ ಮೇಲೂ ಗಿಡ ನೆಡುವ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಚೇನಂಡ ಹಾಕಿ ಉತ್ಸವದ ಕಾರ್ಯದರ್ಶಿ ಮಧು ಮಾದಯ್ಯ ಹೇಳಿದರು.</p>.<p>‘ಗೋಲಿಗೊಂದು ಗಿಡ’ ಎಂಬ ಅಭಿಯಾನದಡಿ 2,200ಕ್ಕೂ ಅಧಿಕ ಸಸಿಗಳನ್ನು ಜಿಲ್ಲೆಯ ವಿವಿಧೆಡೆ ನೆಡಲಾಗಿದೆ. 1,520 ಗೋಲುಗಳು ದಾಖಲಾಗಿವೆ. ದಾಖಲಾದ ಗೋಲಿಗಿಂತಲೂ ಅಧಿಕ ಗಿಡಗಳನ್ನು ನೆಡಲಾಗಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಗಿಡ ನೆಡಲು ಹಣ ಮೀಸಲಿರಿಸಿದ್ದೇವೆ. ಮುಂದೆ ನಶಿಸುವ ಹಂತದಲ್ಲಿರುವ ಕಾಡುಜಾತಿಯ ಹಣ್ಣು ಗಿಡಗಳನ್ನು ನೆಡಲು ಚಿಂತನೆ ನಡೆಸಿದ್ದೇವೆ’ ಎಂದರು.</p>.<p>ಸಮಿತಿಯ ಕಾರ್ಯಾಧ್ಯಕ್ಷ ದೀನಾ ಚೆಂಗಪ್ಪ ಮಾತನಾಡಿ, ‘ಈಗಾಗಲೇ ನೆಟ್ಟಿರುವ ಎಲ್ಲ ಗಿಡಗಳನ್ನು ಆಗಿದ್ದಾಂಗ್ಗೆ ನಾವು ವೀಕ್ಷಿಸುತ್ತಿದ್ದೇವೆ. ಅವುಗಳೆಲ್ಲವೂ ಉತ್ತಮವಾಗಿ ಬೆಳೆಯುತ್ತಿವೆ. ಮುಂದಿನ ದಿನಗಳಲ್ಲಿಯೂ ಆ ಗಿಡಗಳು ಮರಗಳಾಗುವವರೆಗೆ ಅವುಗಳ ಯೋಗಕ್ಷೇಮ ನೋಡಿಕೊಳ್ಳಲಾಗುವುದು’ ಎಂದರು.</p>.<p>ಸುಮಾರು 500ಕ್ಕೂ ಹೆಚ್ಚು ಜೇನುಪೆಟ್ಟಿಗೆಗಳನ್ನು ವಿತರಿಸಲಾಗಿದೆ. ಆ ಪೆಟ್ಟಿಗೆಗಳಿಗೆ ಜೇನುನೊಣಗಳ ಅಗತ್ಯ ಕಂಡು ಬಂದಲ್ಲಿ ಚೇನಂಡ ಹಾಕಿ ಸಮಿತಿಯು ಕೆಲವು ವ್ಯವಸ್ಥೆಗಳನ್ನು ಮಾಡಿದೆ. ಜೇನುನೊಣಗಳು ಬೇಕಾದ್ದಲ್ಲಿ ಸಮಿತಿಯುವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.</p>.<p>ಉತ್ಸವ ಸಮಿತಿ ಅಧ್ಯಕ್ಷ ಕಂಬಣಿ ಕರುಂಬಯ್ಯ, ವಕ್ತಾರ ಸುರೇಶ್ ನಾಣಯ್ಯ, ಸದಸ್ಯ ತಮ್ಮಿ ತಮ್ಮಯ್ಯ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-51-1804452973</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>