ಸಮಾಜದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ‘ಮದುವೆಯಲ್ಲಿ ಚಾಣ ನೀರ್ ತೆಗೆಯುವ ಪದ್ಧತಿಯ ಪ್ರಕಾರ, ಮಂಟಪಕ್ಕೆ ಬಂದ ವಧುವಿನ ತಲೆಯಿಂದ ತಂಬಿಗೆಯನ್ನು ಬೊಳ್ಚ ಕೊಡದ ಕೆಳಗೆ ಇಳಿಸಿ ಗುರು ಕಾರೋಣ ಹಾಗೂ ದೇವರನ್ನು ಪ್ರಾರ್ಥಿಸಲಾಗುತ್ತದೆ. ಹಿರಿಯರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದು, ವರನ ಕೋಣೆಗೆ ತೆರಳುವುದು ಪದ್ಧತಿ. ಆದರೆ, ಇತ್ತೀಚಿಗೆ ಮೂಗು ತೂರಿಸಿರುವ ಕೆಲವು ಆಚರಣೆಗಳನ್ನು ಕೈಬಿಡಬೇಕು’ ಎಂದು ಹೇಳಿದರು.