‘ಹೋಟೆಲ್ಗೆ ಬರುವ ಗ್ರಾಹಕರನ್ನು ಕೇಶವ ಅವರು ಅಷ್ಟೇ ವಿನಯದಿಂದ ಮಾತನಾಡಿಸುತ್ತಿದ್ದರು. ಹೋಟೆಲ್ಗೆ ಹೋದ ಗ್ರಾಹಕರು ಏನಿದೆ ತಿಂಡಿಯೆಂದರೆ ಸಾಕು ‘ಬಿಸಿ ಕೆಂಡವಿದೆ ಬೇಕಾ’ ಎಂದು ನಗುವಿನಿಂದಲೇ ಕೇಳುತ್ತಿದ್ದರು ಕೇಶವ. ಮಡಿಕೇರಿಯಯಲ್ಲಿ ಸಹಜವಾಗಿ ಮಳೆ, ಚಳಿ ವಾತಾವರಣ ಇರಲಿದೆ. ಕೆಲವು ಹೋಟೆಲ್ಗಳಲ್ಲಿ ತಿಂಡಿ ಸಿಗುವುದು ಬೆಳಿಗ್ಗೆ ತಡ. ಆದರೆ, ಕೃಷ್ಣ ಭವನ್ನಲ್ಲಿ ಮಾತ್ರ ಬೆಳಿಗ್ಗೆಯೇ ಗ್ರಾಹಕರಿಗೆ ತಿಂಡಿ ಸಿಗುತ್ತಿತ್ತು. ಅಧಿಕಾರಿಗಳು ತಿಂಡಿ ಸೇವಿಸಿ ಕಚೇರಿಗಳಿಗೆ ತೆರಳುತ್ತಿದ್ದರು’ ಎಂದು ಗ್ರಾಹಕರೊಬ್ಬರು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ.