ಸಿದ್ದರಾಮಯ್ಯ ಬಹಿರಂಗವಾಗಿ ತಾವು ಮುಸ್ಲಿಮರ ಪರ, ಗೋಮಾಂಸ ತಿನ್ನುತ್ತೇವೆ ಎಂದು ಹೇಳಲಿ. ಇಲ್ಲವೇ, ತಾವು ಮುಸ್ಲಿಮರ ವಿರೋಧಿ, ಗೋಮಾಂಸ ತಿನ್ನುವುದಿಲ್ಲ ಎಂದು ಅದನ್ನಾದರೂ ಹೇಳಲಿ. ಇವರ ನಾಟಕವನ್ನು ಅರಿತಿರುವ ಚಾಮುಂಡೇಶ್ವರಿ ಕ್ಷೇತ್ರದ ಜನರು ಇವರನ್ನು ಸೋಲಿಸಿದರು. ಈಗ ಚುನಾವಣೆಗೆ ಸ್ಪರ್ಧಿಸಲು ಅವರು ಕ್ಷೇತ್ರ ಹುಡುಕುತ್ತಿದ್ದಾರೆ. ಧೈರ್ಯವಿದ್ದರೆ ಕೋಲಾರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲಿ ಎಂದೂ ಸವಾಲೆಸೆದರು.