ಶನಿವಾರಸಂತೆ: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಳ್ತೆ –ವಳಗುಂದ ಗ್ರಾಮದ ವೆಂಕಟೇಶ್ (49) ತೋಟದಲ್ಲಿ ಶುಕ್ರವಾರ ಸಿಲ್ವರ್ ಮರ ತುಂಡರಿಸುತ್ತಿದ್ದ ಸಂದರ್ಭ ಕೊಂಬೆ ತಲೆಯ ಮೇಲೆ ಬಿದ್ದು ಮೃತಪಟ್ಟಿದ್ದಾರೆ.
ವಿವಾಹಿತ ವೆಂಕಟೇಶ್ ಕೂಲಿಕಾರ್ಮಿಕನಾಗಿದ್ದು ಗ್ರಾಮದ ಪ್ರಸನ್ನ ಅವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕೊಂಬೆ ಬಿದ್ದಿದೆ.ಗಾಯಗೊಂಡ ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುವಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೃತರ ಸಹೋದರ ಎಚ್.ಎನ್.ಕೃಷ್ಣಮೂರ್ತಿ ದೂರು ನೀಡಿದ್ದು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಎಸ್ಐ ಎಚ್.ಎಂ.ಗೋವಿಂದ್ ಪ್ರಕರಣ ದಾಖಲಿಸಿದ್ದಾರೆ.