ಈ ಕೆರೆ ಪೊನ್ನಂಪೇಟೆ ಹೃದಯ ಭಾಗವಾದ ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ಅಂತರದಲ್ಲಿದೆ. ಪಟ್ಟಣದ ಹೆಗ್ಗುರುತಾದ ಬಸವೇಶ್ವರ ದೇವಾಲಯದಲ್ಲಿ ಶಿವ ಪಾರ್ವತಿ ಮತ್ತು ಗಣಪತಿ ವಿಗ್ರಹಗಳಿವೆ. ನೂರಾರು ವರ್ಷಗಳಿಂದ ಗಣೇಶೋತ್ಸವದಲ್ಲಿ ಗೌರಿ ಗಣಪತಿ ಕೂರಿಸಿ, ಬಳಿಕ ಅವುಗಳ ವಿಸರ್ಜನೆಗೆ ಈ ಕೆರೆಯನ್ನೇ ಬಳಸಲಾಗುತ್ತಿದೆ. ಹೀಗಾಗಿ, ಇದಕ್ಕೆ ಗೌರಿ ಕೆರೆ ಎಂದು ಹೆಸರು ಬಂದಿದೆ ಎನ್ನುತ್ತಾರೆ ಪಟ್ಟಣದ ಹಿರಿಯರಾದ ಎಸ್.ಎಲ್.ಶಿವಣ್ಣ.