ಕಾನೂರಿನ ನಿವಾಸಿ ಸುಬ್ಬಮ್ಮ ಪೊನ್ನಂಪೇಟೆಯಲ್ಲಿ 2016ರಲ್ಲಿ ನಡೆದಿದ್ದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ‘ಭಾವನೆಯಲ್ಲರಳಿದ ಪುಷ್ಪದೆಸಳುಗಳು’, ‘ಚುಟುಕಿನ ಸವಿ ಗುಟುಕು’ ಕನ್ನಡದ ಪ್ರಮುಖ ಕೃತಿಗಳಾಗಿದ್ದರೆ, ‘ಪಳೆಯ ತಕ್ಕ್’, ‘ಪೊನ್ತಕ್ಕ್’, ‘ಅಂಜಿ ಕೂಟ್ನ ಅಣಿಮುತ್ತ್’, ‘ಪೊಂದುಳಿ’, ‘ಶ್ರೀಹರಿ ದಶಾವತಾರ’, ‘ಮಹಾಕಾವ್ಯ’ ಹಾಗೂ ‘ಯಕ್ಷ ಪ್ರಶ್ನೆ’ ಕೊಡವ ಭಾಷೆಯ ಪ್ರಮುಖ ಕೃತಿಗಳು.