<p>ಮಡಿಕೇರಿ: ಇಲ್ಲಿನ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಗಾಯಕ ಲಿಯಾಕತ್ ಆಲಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಹಿರಿಯ ಮುತ್ಸದ್ದಿ ಎಂ.ಸಿ.ನಾಣಯ್ಯ ಅವರು ದೂರವಾಣಿ ಮೂಲಕ ಹಾಗೂ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು ವಾಟ್ಸ್ಆ್ಯಪ್ ಸಂದೇಶದ ಮೂಲಕ ನುಡಿನಮನ ಸಲ್ಲಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಅವರು, ‘ಕೊಡಗು ಕಂಡಂತಹ ಅಪ್ರತಿಮ ಗಾಯಕ ಲಿಯಾಕತ್ ಆಲಿ ಅವರ ನಿಧನ ಕೊಡಗಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ’ ಎಂದು ಹೇಳಿದರು.</p>.<p>ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯರಾಗಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸ್ಥಾಪಕ ಸದಸ್ಯರಾಗಿ, ಮಡಿಕೇರಿ ಪುರಸಭೆಯ ಉಪಾಧ್ಯಕ್ಷರಾಗಿ ಸಲ್ಲಿಸಿದ ಸಮಾಜ ಸೇವೆ ಶ್ಲಾಘನೀಯ. ಮಡಿಕೇರಿಯಲ್ಲಿ ಕುವೆಂಪು ಪುತ್ಥಳಿ ಸ್ಥಾಪಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.</p>.<p>ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಚಿಕ್ಕಂದಿನಿಂದಲೂ ಲಿಯಾಕತ್ ಆಲಿ ಅವರಿಗಿದ್ದ ಸಾಹಿತ್ಯಾಸಕ್ತಿ, ಗಾಯನ ಪ್ರೇಮ ಶ್ಲಾಘನೀಯ. ಅಲ್ಲದೆ ಅವರು ಉತ್ತಮ ನಟರೂ ಆಗಿದ್ದರು. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು’ ಎಂದರು.</p>.<p>ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಮಾತನಾಡಿ, ‘ನಾವು ಚಿಕ್ಕಂದಿನಿಂದಲೂ ಒಟ್ಟಾಗಿ ಬೆಳೆದವರು ಸಾಹಿತ್ಯ ಪರಿಷತ್ತಿನಲ್ಲಿ, ಲೇಖಕ ಕಲಾವಿದರ ಬಳಗದಲ್ಲಿ, ಮಡಿಕೇರಿ ಪುರಸಭೆಯಲ್ಲಿ ಒಟ್ಟಾಗಿ ಕೆಲಸ ಮಾಡಿದವರು. ಎಲ್ಲರನ್ನು ಪ್ರೀತಿಯಿಂದ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದ ಲಿಯಾಕತ್ ಆಲಿ ಅವರದ್ದು ಮರೆಯಲು ಅಸಾಧ್ಯವಾದಂತಹ ವ್ಯಕ್ತಿತ್ವ’ ಎಂದು ಹೇಳಿದರು.</p>.<p>ಕೊಡಗು ಜಿಲ್ಲಾ ಸ್ಕೌಟ್ ಅಂಡ್ ಗೈಡ್ಸ್ನ ಆಯುಕ್ತ ಬೇಬಿ ಮ್ಯಾಥ್ಯು, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಜುಲ್ಲೆಕಾಬಿ, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಸಾಹಿತಿ ಅಲ್ಲಾರಂಡ ವಿಠಲ, ಶಿಕ್ಷಕ ಸುಲೇಮಾನ್, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶ್ವೇತಾ ರವೀಂದ್ರ, ಜಿ.ಸಿ.ಜಗದೀಶ್, ಶೇಕ್ ಅಹಮದ್, ಆಪಾಟೀರ ಟಾಟು ಮೊಣ್ಣಪ್ಪ, ಪುಷ್ಪ ಪೂಣಚ್ಚ, ತನು ತಿಮ್ಮಯ್ಯ, ಹಂಸ ಕೊಟ್ಟಮುಡಿ, ಖಾಲಿದ್ ಹಾಕತ್ತೂರು, ಖಲೀಲ್ ಭಾಷಾ, ರಹುಫ್ ಅಹಮದ್, ಯಾಕುಬ್, ಜಲೀಲ್ ನಾಪೊಕ್ಲು, ರೈತ್ ಅವರು ನುಡಿನಮನ ಸಲ್ಲಿಸಿದರು.</p>.<p>ಇದಕ್ಕೂ ಮುನ್ನ ಲಿಯಾಕತ್ ಆಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.</p>.<blockquote>ಹಲವು ಗಣ್ಯರಿಂದ ನುಡಿನಮನ | ಕುವೆಂಪು ಪುತ್ಥಳಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ | ಲಿಯಾಕತ್ ಆಲಿ ಭಾವಚಿತ್ರಕ್ಕೆ ಪುಷ್ಪನಮನ</blockquote>.<p><strong>‘ಗಾಯನಕ್ಕೆ ಜಾತಿ ಧರ್ಮಭೇದವಿಲ್ಲ ಎಂದು ತೋರಿಸಿಕೊಟ್ಟವರು ಲಿಯಾಕತ್ ಆಲಿ’</strong> </p><p>ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತೀರ ಧರ್ಮಜಾ ಉತ್ತಪ್ಪ ಮಾತನಾಡಿ ‘ಗಾಯನಕ್ಕೆ ಜಾತಿ ಧರ್ಮಭೇದವಿಲ್ಲ ಎನ್ನುವುದನ್ನು ತೋರಿಸಿಕೊಟ್ಟವರು ಲಿಯಾಕತ್ ಆಲಿ ಅವರು. ದೇಶಭಕ್ತಿ ಗೀತೆಗಳೊಂದಿಗೆ ದಾಸರ ಪದಗಳನ್ನು ಹಾಡುವಾಗ ನಾವು ಅದರಲ್ಲಿ ಮುಳುಗಿ ಹೋಗುತ್ತಿದ್ದೆವು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಇಲ್ಲಿನ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಗಾಯಕ ಲಿಯಾಕತ್ ಆಲಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಹಿರಿಯ ಮುತ್ಸದ್ದಿ ಎಂ.ಸಿ.ನಾಣಯ್ಯ ಅವರು ದೂರವಾಣಿ ಮೂಲಕ ಹಾಗೂ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು ವಾಟ್ಸ್ಆ್ಯಪ್ ಸಂದೇಶದ ಮೂಲಕ ನುಡಿನಮನ ಸಲ್ಲಿಸಿದರು.</p>.<p>ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಅವರು, ‘ಕೊಡಗು ಕಂಡಂತಹ ಅಪ್ರತಿಮ ಗಾಯಕ ಲಿಯಾಕತ್ ಆಲಿ ಅವರ ನಿಧನ ಕೊಡಗಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ’ ಎಂದು ಹೇಳಿದರು.</p>.<p>ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯರಾಗಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸ್ಥಾಪಕ ಸದಸ್ಯರಾಗಿ, ಮಡಿಕೇರಿ ಪುರಸಭೆಯ ಉಪಾಧ್ಯಕ್ಷರಾಗಿ ಸಲ್ಲಿಸಿದ ಸಮಾಜ ಸೇವೆ ಶ್ಲಾಘನೀಯ. ಮಡಿಕೇರಿಯಲ್ಲಿ ಕುವೆಂಪು ಪುತ್ಥಳಿ ಸ್ಥಾಪಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.</p>.<p>ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಚಿಕ್ಕಂದಿನಿಂದಲೂ ಲಿಯಾಕತ್ ಆಲಿ ಅವರಿಗಿದ್ದ ಸಾಹಿತ್ಯಾಸಕ್ತಿ, ಗಾಯನ ಪ್ರೇಮ ಶ್ಲಾಘನೀಯ. ಅಲ್ಲದೆ ಅವರು ಉತ್ತಮ ನಟರೂ ಆಗಿದ್ದರು. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು’ ಎಂದರು.</p>.<p>ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಮಾತನಾಡಿ, ‘ನಾವು ಚಿಕ್ಕಂದಿನಿಂದಲೂ ಒಟ್ಟಾಗಿ ಬೆಳೆದವರು ಸಾಹಿತ್ಯ ಪರಿಷತ್ತಿನಲ್ಲಿ, ಲೇಖಕ ಕಲಾವಿದರ ಬಳಗದಲ್ಲಿ, ಮಡಿಕೇರಿ ಪುರಸಭೆಯಲ್ಲಿ ಒಟ್ಟಾಗಿ ಕೆಲಸ ಮಾಡಿದವರು. ಎಲ್ಲರನ್ನು ಪ್ರೀತಿಯಿಂದ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದ ಲಿಯಾಕತ್ ಆಲಿ ಅವರದ್ದು ಮರೆಯಲು ಅಸಾಧ್ಯವಾದಂತಹ ವ್ಯಕ್ತಿತ್ವ’ ಎಂದು ಹೇಳಿದರು.</p>.<p>ಕೊಡಗು ಜಿಲ್ಲಾ ಸ್ಕೌಟ್ ಅಂಡ್ ಗೈಡ್ಸ್ನ ಆಯುಕ್ತ ಬೇಬಿ ಮ್ಯಾಥ್ಯು, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಜುಲ್ಲೆಕಾಬಿ, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಸಾಹಿತಿ ಅಲ್ಲಾರಂಡ ವಿಠಲ, ಶಿಕ್ಷಕ ಸುಲೇಮಾನ್, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶ್ವೇತಾ ರವೀಂದ್ರ, ಜಿ.ಸಿ.ಜಗದೀಶ್, ಶೇಕ್ ಅಹಮದ್, ಆಪಾಟೀರ ಟಾಟು ಮೊಣ್ಣಪ್ಪ, ಪುಷ್ಪ ಪೂಣಚ್ಚ, ತನು ತಿಮ್ಮಯ್ಯ, ಹಂಸ ಕೊಟ್ಟಮುಡಿ, ಖಾಲಿದ್ ಹಾಕತ್ತೂರು, ಖಲೀಲ್ ಭಾಷಾ, ರಹುಫ್ ಅಹಮದ್, ಯಾಕುಬ್, ಜಲೀಲ್ ನಾಪೊಕ್ಲು, ರೈತ್ ಅವರು ನುಡಿನಮನ ಸಲ್ಲಿಸಿದರು.</p>.<p>ಇದಕ್ಕೂ ಮುನ್ನ ಲಿಯಾಕತ್ ಆಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.</p>.<blockquote>ಹಲವು ಗಣ್ಯರಿಂದ ನುಡಿನಮನ | ಕುವೆಂಪು ಪುತ್ಥಳಿ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ | ಲಿಯಾಕತ್ ಆಲಿ ಭಾವಚಿತ್ರಕ್ಕೆ ಪುಷ್ಪನಮನ</blockquote>.<p><strong>‘ಗಾಯನಕ್ಕೆ ಜಾತಿ ಧರ್ಮಭೇದವಿಲ್ಲ ಎಂದು ತೋರಿಸಿಕೊಟ್ಟವರು ಲಿಯಾಕತ್ ಆಲಿ’</strong> </p><p>ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತೀರ ಧರ್ಮಜಾ ಉತ್ತಪ್ಪ ಮಾತನಾಡಿ ‘ಗಾಯನಕ್ಕೆ ಜಾತಿ ಧರ್ಮಭೇದವಿಲ್ಲ ಎನ್ನುವುದನ್ನು ತೋರಿಸಿಕೊಟ್ಟವರು ಲಿಯಾಕತ್ ಆಲಿ ಅವರು. ದೇಶಭಕ್ತಿ ಗೀತೆಗಳೊಂದಿಗೆ ದಾಸರ ಪದಗಳನ್ನು ಹಾಡುವಾಗ ನಾವು ಅದರಲ್ಲಿ ಮುಳುಗಿ ಹೋಗುತ್ತಿದ್ದೆವು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>