ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು, ಜಲ್ಲಿ ಅಕ್ರಮ ಸಾಗಣೆ: ಲಾರಿಗಳ ವಶ

Last Updated 4 ಮೇ 2021, 5:31 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಂಪಾಪುರ ಗ್ರಾಮದ ಹೇಮಾವತಿ ಹಿನ್ನೀರು ನದಿ ಪಾತ್ರದಲ್ಲಿ ಯಾಂತ್ರಿಕ ದೋಣಿ ಬಳಸಿ ಅಕ್ರಮವಾಗಿ ಮರಳು ಮತ್ತು ಜಲ್ಲಿ ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ಭಾನುವಾರ ಅಧಿಕಾರಿಗಳು ವಶಕ್ಕೆ ಪಡೆದು ಶನಿವಾರಸಂತೆ ಪೊಲೀಸರಿಗೆ ಒಪ್ಪಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆಯಂತೆ ವಿಜ್ಞಾನಿಗಳಾದ ರೋಯಲ್, ಎಚ್.ಡಿ.ರೋಜಾ, ಎಂ.ಎಸ್.ರಾಹುಲ್ ತಂಡ, ಸರ್ಕಲ್‌ ಇನ್‌ಸ್ಪ‍ಕ್ಟರ್‌ ಮಹೇಶ್ ಮತ್ತು ಕೊಡ್ಲಿಪೇಟೆ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು.

ನದಿಪಾತ್ರದಲ್ಲಿ ಬಳಸಿದ ಅನಧಿಕೃತ ಯಾಂತ್ರಿಕ ದೋಣಿ ಹಾಗೂ ಪರವಾನಗಿ ಇಲ್ಲದೆ ಮರಳು ಮತ್ತು ಜಲ್ಲಿ ತುಂಬಿ ಸಾಗಣೆ ಮಾಡುತ್ತಿದ್ದ ಮೂರು ಲಾರಿಗಳನ್ನು ವಶಪಡಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT