<p><strong>ಮಡಿಕೇರಿ:</strong> ಕುಶಾಲನಗರದ ದುಬಾರೆ ಶಿಬಿರದಲ್ಲಿ ಸೋಮವಾರ ಸಾಕಾನೆಗಳಾದ ‘ಕಂಜನ್’ ಮತ್ತು ‘ಮಾರ್ತಾಂಡ’ ನಡುವಿನ ಕಾದಾಟದಲ್ಲಿ ಸಿಲುಕಿದ ಪ್ರವಾಸಿ ಮಹಿಳೆ, ತಮಿಳುನಾಡಿನ ಜೋಯ್ಸಿ (33) ಮೃತಪಟ್ಟಿದ್ದಾರೆ. ಅವರ ಪತಿ ಜೋಯಲ್, ಒಂದು ವರ್ಷದ ಮಗು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ‘ಮಾರ್ತಾಂಡ’ ತೀವ್ರವಾಗಿ ಗಾಯಗೊಂಡಿದೆ.</p><p>‘ಮಾರ್ತಾಂಡ’ ಆನೆಗೆ ಸ್ನಾನ ಮಾಡಿಸುವಾಗ ‘ಕಂಜನ್’ ದಾಳಿ ನಡೆಸಿದೆ. ಇದರಿಂದ ‘ಮಾರ್ತಾಂಡ’ ಆನೆ ಜೋಯ್ಸಿ ಮೇಲೆ ಬಿದ್ದಿದ್ದು, ಅವರು ನೀರಿನಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಮಗುವನ್ನು ಹಿಡಿದುಕೊಂಡು ಪತಿ ಜೋಯಲ್ ಪಾರಾದರು. ಜೋಯ್ಸಿ ಅವರನ್ನು ಎಳೆಯಲು ಜೋಯಲ್ ಯತ್ನಿಸಿದರಾದರೂ ಅಷ್ಟು ಹೊತ್ತಿಗಾಗಲೇ ಆನೆಯು ಮೇಲೆಯೇ ಬಿದ್ದು ಒದ್ದಾಡುತ್ತಿತ್ತು. ನಂತರ ಅವರು ಪತ್ನಿಯನ್ನು ಆನೆಯ ಕೆಳಗಿನಿಂದ ಹೊರಕ್ಕೆ ಎಳೆದರು.</p><p>ಘಟನೆಯನ್ನು ದೂರದಿಂದ ನೋಡುತ್ತಿದ್ದ ರ್ಯಾಫ್ಟಿಂಗ್ ತಂಡದ ಪ್ರತಾಪ್, ನಿಶ್ಚಿತ್, ನಿತನ್, ಪುರುಷೋತ್ತಮ್, ರೋಹಿತ್ ಅವರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಬೋಟ್ ಮೂಲಕ ದಡಕ್ಕೆ ತರುವಲ್ಲಿ ಸಹಕರಿಸಿದರು. ಆಂಬುಲೆನ್ಸ್, ಅರಣ್ಯ ಇಲಾಖೆ ವಾಹನಕ್ಕೆ ಕಾಯದೇ, ಖಾಸಗಿ ವಾಹನದಲ್ಲಿ ಕುಶಾಲನಗರದ ಖಾಸಗಿ ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿ ಮಹಿಳೆ ಮೃತಪಟ್ಟಿದ್ದರು.</p>.<h2><strong>ಪ್ರವಾಸಿ ಸಾವು ಇದೇ ಮೊದಲು: </strong></h2><p>‘ಸಾಕಾನೆಗಳ ನಡುವೆ ಜಗಳ, ಕಾದಾಟ ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಮಾವುತರು, ಆನೆಗಳಿಗೆ ಪೆಟ್ಟಾಗುವುದು ಉಂಟು. ಆದರೆ, ಪ್ರವಾಸಿಗರು ಮೃತಪಟ್ಟಿರುವುದು ಇದೇ ಪ್ರಥಮ. ಮಾರ್ತಾಂಡ ಸ್ಥಿತಿ ಸಹ ಗಂಭೀರವಾಗಿದೆ’ ಎಂದು ಡಿಸಿಎಫ್ ಅಭಿಷೇಕ್ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ‘ಕಂಜನ್’ ಆನೆ ಯನ್ನು ನಿಯಂತ್ರಣಕ್ಕೆ ತರುವಲ್ಲಿ ಮಾವುತ ಸಫಲರಾಗಿದ್ದಾರೆ. ಮುನ್ನೆಚ್ಚರಿಕೆಯಾಗಿ ಮೇ 19ರಂದು ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರಿಗೆ ಪ್ರವೇಶವಿರುವುದಿಲ್ಲ’ ಎಂದರು.</p><h2><strong>ತುರ್ತು ಚಿಕಿತ್ಸಾ ವಾಹನ ಇರಲಿಲ್ಲ: </strong></h2><p>ಸುದ್ದಿಗಾರರೊಂದಿಗೆ ಮಾತನಾಡಿದ ಜೋಯಲ್, ‘ಸ್ಥಳದಲ್ಲಿ ತುರ್ತು ಚಿಕಿತ್ಸಾ ವಾಹನ ಇರಲಿಲ್ಲ. ಸಿಬ್ಬಂದಿ ಇದ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಕನಿಷ್ಠ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಅಲ್ಲಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p><p>‘ನಾನು, ಪತ್ನಿ, ಮಗು ಚೆನ್ನೈನ ಪರ್ಲಾವರಂನಿಂದ ಮೈಸೂರಿಗೆ ಬಂದು ಅಲ್ಲಿಂದ ದುಬಾರೆಗೆ ಬಂದಿದ್ದೆವು. ಆನೆಗಳ ಸ್ನಾನ ವೀಕ್ಷಣೆಗೆ ತಲಾ ₹ 300 ನೀಡಿ ಟಿಕೆಟ್ ಖರೀದಿಸಿದ್ದು, ಸ್ಥಳದ ಪಕ್ಕ ಫೋಟೊ ತೆಗೆಯುತ್ತಿದ್ದೆವು’ ಎಂದರು.</p>.<h2><strong>ಆನೆಗಳ ಸ್ನಾನ ವೀಕ್ಷಿಸಲು 100 ಅಡಿ ಅಂತರ: ಈಶ್ವರ ಖಂಡ್ರೆ</strong></h2><p>ಘಟನೆಯ ನಂತರ ಎಚ್ಚೆತ್ತಿರುವ ಅರಣ್ಯ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಅವರು, ಇನ್ನು ಮುಂದೆ ಸಾಕಾನೆಗಳ ಸ್ನಾನ ವೀಕ್ಷಿಸಲು 100 ಅಡಿ ಅಂತರ ಕಾಯ್ದುಕೊಳ್ಳುವಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ರಚಿಸಲು ಆದೇಶಿಸಿದ್ದಾರೆ.</p><p>ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡದಂತೆ ಮತ್ತು ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಿಸದಂತೆ ಆದೇಶ ಹೊರಡಿಸಲೂ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕುಶಾಲನಗರದ ದುಬಾರೆ ಶಿಬಿರದಲ್ಲಿ ಸೋಮವಾರ ಸಾಕಾನೆಗಳಾದ ‘ಕಂಜನ್’ ಮತ್ತು ‘ಮಾರ್ತಾಂಡ’ ನಡುವಿನ ಕಾದಾಟದಲ್ಲಿ ಸಿಲುಕಿದ ಪ್ರವಾಸಿ ಮಹಿಳೆ, ತಮಿಳುನಾಡಿನ ಜೋಯ್ಸಿ (33) ಮೃತಪಟ್ಟಿದ್ದಾರೆ. ಅವರ ಪತಿ ಜೋಯಲ್, ಒಂದು ವರ್ಷದ ಮಗು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ‘ಮಾರ್ತಾಂಡ’ ತೀವ್ರವಾಗಿ ಗಾಯಗೊಂಡಿದೆ.</p><p>‘ಮಾರ್ತಾಂಡ’ ಆನೆಗೆ ಸ್ನಾನ ಮಾಡಿಸುವಾಗ ‘ಕಂಜನ್’ ದಾಳಿ ನಡೆಸಿದೆ. ಇದರಿಂದ ‘ಮಾರ್ತಾಂಡ’ ಆನೆ ಜೋಯ್ಸಿ ಮೇಲೆ ಬಿದ್ದಿದ್ದು, ಅವರು ನೀರಿನಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ಮಗುವನ್ನು ಹಿಡಿದುಕೊಂಡು ಪತಿ ಜೋಯಲ್ ಪಾರಾದರು. ಜೋಯ್ಸಿ ಅವರನ್ನು ಎಳೆಯಲು ಜೋಯಲ್ ಯತ್ನಿಸಿದರಾದರೂ ಅಷ್ಟು ಹೊತ್ತಿಗಾಗಲೇ ಆನೆಯು ಮೇಲೆಯೇ ಬಿದ್ದು ಒದ್ದಾಡುತ್ತಿತ್ತು. ನಂತರ ಅವರು ಪತ್ನಿಯನ್ನು ಆನೆಯ ಕೆಳಗಿನಿಂದ ಹೊರಕ್ಕೆ ಎಳೆದರು.</p><p>ಘಟನೆಯನ್ನು ದೂರದಿಂದ ನೋಡುತ್ತಿದ್ದ ರ್ಯಾಫ್ಟಿಂಗ್ ತಂಡದ ಪ್ರತಾಪ್, ನಿಶ್ಚಿತ್, ನಿತನ್, ಪುರುಷೋತ್ತಮ್, ರೋಹಿತ್ ಅವರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಬೋಟ್ ಮೂಲಕ ದಡಕ್ಕೆ ತರುವಲ್ಲಿ ಸಹಕರಿಸಿದರು. ಆಂಬುಲೆನ್ಸ್, ಅರಣ್ಯ ಇಲಾಖೆ ವಾಹನಕ್ಕೆ ಕಾಯದೇ, ಖಾಸಗಿ ವಾಹನದಲ್ಲಿ ಕುಶಾಲನಗರದ ಖಾಸಗಿ ಆಸ್ಪತ್ರೆಗೆ ಕರೆತರುವ ಮಾರ್ಗದಲ್ಲಿ ಮಹಿಳೆ ಮೃತಪಟ್ಟಿದ್ದರು.</p>.<h2><strong>ಪ್ರವಾಸಿ ಸಾವು ಇದೇ ಮೊದಲು: </strong></h2><p>‘ಸಾಕಾನೆಗಳ ನಡುವೆ ಜಗಳ, ಕಾದಾಟ ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಮಾವುತರು, ಆನೆಗಳಿಗೆ ಪೆಟ್ಟಾಗುವುದು ಉಂಟು. ಆದರೆ, ಪ್ರವಾಸಿಗರು ಮೃತಪಟ್ಟಿರುವುದು ಇದೇ ಪ್ರಥಮ. ಮಾರ್ತಾಂಡ ಸ್ಥಿತಿ ಸಹ ಗಂಭೀರವಾಗಿದೆ’ ಎಂದು ಡಿಸಿಎಫ್ ಅಭಿಷೇಕ್ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ‘ಕಂಜನ್’ ಆನೆ ಯನ್ನು ನಿಯಂತ್ರಣಕ್ಕೆ ತರುವಲ್ಲಿ ಮಾವುತ ಸಫಲರಾಗಿದ್ದಾರೆ. ಮುನ್ನೆಚ್ಚರಿಕೆಯಾಗಿ ಮೇ 19ರಂದು ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರಿಗೆ ಪ್ರವೇಶವಿರುವುದಿಲ್ಲ’ ಎಂದರು.</p><h2><strong>ತುರ್ತು ಚಿಕಿತ್ಸಾ ವಾಹನ ಇರಲಿಲ್ಲ: </strong></h2><p>ಸುದ್ದಿಗಾರರೊಂದಿಗೆ ಮಾತನಾಡಿದ ಜೋಯಲ್, ‘ಸ್ಥಳದಲ್ಲಿ ತುರ್ತು ಚಿಕಿತ್ಸಾ ವಾಹನ ಇರಲಿಲ್ಲ. ಸಿಬ್ಬಂದಿ ಇದ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಕನಿಷ್ಠ ಪ್ರಥಮ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಅಲ್ಲಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p><p>‘ನಾನು, ಪತ್ನಿ, ಮಗು ಚೆನ್ನೈನ ಪರ್ಲಾವರಂನಿಂದ ಮೈಸೂರಿಗೆ ಬಂದು ಅಲ್ಲಿಂದ ದುಬಾರೆಗೆ ಬಂದಿದ್ದೆವು. ಆನೆಗಳ ಸ್ನಾನ ವೀಕ್ಷಣೆಗೆ ತಲಾ ₹ 300 ನೀಡಿ ಟಿಕೆಟ್ ಖರೀದಿಸಿದ್ದು, ಸ್ಥಳದ ಪಕ್ಕ ಫೋಟೊ ತೆಗೆಯುತ್ತಿದ್ದೆವು’ ಎಂದರು.</p>.<h2><strong>ಆನೆಗಳ ಸ್ನಾನ ವೀಕ್ಷಿಸಲು 100 ಅಡಿ ಅಂತರ: ಈಶ್ವರ ಖಂಡ್ರೆ</strong></h2><p>ಘಟನೆಯ ನಂತರ ಎಚ್ಚೆತ್ತಿರುವ ಅರಣ್ಯ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಅವರು, ಇನ್ನು ಮುಂದೆ ಸಾಕಾನೆಗಳ ಸ್ನಾನ ವೀಕ್ಷಿಸಲು 100 ಅಡಿ ಅಂತರ ಕಾಯ್ದುಕೊಳ್ಳುವಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ರಚಿಸಲು ಆದೇಶಿಸಿದ್ದಾರೆ.</p><p>ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡದಂತೆ ಮತ್ತು ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಿಸದಂತೆ ಆದೇಶ ಹೊರಡಿಸಲೂ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>