<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯ ಹಲವೆಡೆ ಶುಕ್ರವಾರ ‘ಈದುಲ್ ಫಿತ್ರ್’ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಇನ್ನೂ ಕೆಲವೆಡೆ ಶನಿವಾರ ಹಬ್ಬ ಆಚರಣೆ ನಡೆಯಲಿದ್ದು, ಅದಕ್ಕಾಗಿ ಭರದ ಸಿದ್ಧತೆಗಳನ್ನು ನಡೆಸಿದರು.</p>.<p>ನಗರದ ಬದ್ರಿಯಾ ಮಸೀದಿ ಸೇರಿದಂತೆ ಕೆಲವಾರು ಮಸೀದಿಗಳ ಜನರು ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಸಿದರು. ತಮ್ಮ ತಮ್ಮ ಮಸೀದಿಗಳಿಂದ ಹೊರಟ ಮೆರವಣಿಗೆಯು ಈದ್ಗಾ ಮೈದಾನ ತಲುಪಿತು. ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು, ಆಲಿಂಗಿಸಿ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು</p>.<p>ಎಲ್ಲ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ತಮ್ಮ ತಮ್ಮ ಮನೆಗಳಲ್ಲೂ ಸಡಗರದಿಂದ ಹಬ್ಬ ಆಚರಿಸಿದರು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.</p>.<p>ಬಿರಿಯಾನಿ ಸೇರಿದಂತೆ ವಿಶೇಷ ಬಗೆಯ ತಿನಿಸುಗಳನ್ನು ತಯಾರಿಸಿ ಬಂಧು, ಬಾಂಧವರು, ಸ್ನೇಹಿತರನ್ನು ಆಹ್ವಾನಿಸಿ ಹಂಚಿಕೊಂಡರು. ಬಡವರಿಗೆ ದಾನ ಮಾಡಿದರು. ಕೆಲಸಕ್ಕಾಗಿ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಎಲ್ಲರೂ ತಮ್ಮ ತಮ್ಮ ಮನೆ ತಲುಪಿದ್ದರು. ತಮ್ಮ ಕುಟುಂಬದವರೊಂದಿಗೆ ಸೇರಿ ಹಬ್ಬ ಆಚರಿಸಿದರು.</p>.<p>ಮಡಿಕೇರಿಯಲ್ಲಿ ಇನ್ನೂ ಕೆಲವರು ಶನಿವಾರ ಹಬ್ಬ ಆಚರಿಸಲಿದ್ದಾರೆ.</p>.<blockquote>ಹೊಸ ಬಟ್ಟೆ ಧರಿಸಿ ಪ್ರಾರ್ಥನೆ</blockquote>. <p>--------------------------------</p><p>ನಾಪೋಕ್ಲು: ಇಲ್ಲಿಯ ಪಟ್ಟಣದ ಮೊಹಿಯುದ್ದಿನ್ ಜುಮ್ಮಾ ಮಸೀದಿ , ಮದೀನ ಮಸೀದಿ, ಸೇರಿದಂತೆ ಸುತ್ತತಲಿನ ಚೆರಿಯಪರಂಬು, ಹಳೆ ತಾಲ್ಲೂಕು, ಎಮ್ಮೆಮಾಡು, ಕುಂಜಿಲ, ಕೊಳಕೇರಿ, ಕೊಟ್ಟಮುಡಿ, ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಸಂಭ್ರಮದಿಂದ ಈದುಲ್ ಫಿತ್ರ್ ಆಚರಿಸಿದರು.</p><p>ಇಲ್ಲಿಯ ಮೊಹಿಯುದ್ದಿನ್ ಜುಮ್ಮಾ ಮಸೀದಿಯ ಕಾರ್ಯಕ್ರಮದಲ್ಲಿ ಖತೀಬ್ ಉಬೈದ್ ಸಖಾಫಿ ಈದ್ ಸಂದೇಶ ನೀಡಿ ಶಾಂತಿ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಸಾಮೂಹಿಕ ನಮಾಜ್ ಬಳಿಕ ಎಲ್ಲರೂ ಪರಸ್ಪರ ಶುಭಾಶಯ ಹಂಚಿಕೊಂಡರು. ಮರಣ ಹೊಂದಿದವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ಪ್ರಾರ್ಥನೆ ನಡೆಸಿದರು.</p><p>ಜಮಾಯತ್ ಅಧ್ಯಕ್ಷ ಎಂ.ಎಚ್ ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಪಿ.ಎಂ. ಬದ್ರುದ್ದೀನ್ , ಪಿ.ಎಂ.ಅರಫತ್, ಕಾರ್ಯದರ್ಶಿ ಪಿ.ಎಂ.ಯೂನಸ್, ಖಜಾಂಚಿ ಅಬ್ದುಲ್ ರೆಹಮಾನ್ ಹಾಜಿ., ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮಾಜಿ ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.</p>.<blockquote>ಖಿಳರಿಯಾ ಮಸೀದಿಯಲ್ಲಿ ಈದ್</blockquote>. <p>ಸೋಮವಾರಪೇಟೆ: ಬಜೆಗುಂಡಿ ಗ್ರಾಮದ ಖಿಳರಿಯಾ ಜುಮಾ ಮಸೀದಿಯಲ್ಲಿ ಮುಸ್ಲಿಮರು ಶುಕ್ರವಾರ ಈದ್ ಉಲ್ ಫಿತ್ರ್ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p><p>ಜಮಾಅತ್ ಅಧ್ಯಕ್ಷ ಕೆ.ಎ. ಯಾಕುಬ್ ಮಾತನಾಡಿ, ಎಲ್ಲೆಡೆ ಆವರಿಸಿರುವ ಯುದ್ಧ ಭೀತಿ ಮುಕ್ತಾಯವಾಗಿ ಸರ್ವರೂ ನೆಮ್ಮದಿ, ಶಾಂತಿಯಿಂದ ಜೀವನ ನಡೆಸುವಂತಾಗಲಿ ಎಂದು ಆಶಿಸಿದರು. ಭ ಜಮಾಅತ್ ಖತೀಬ ಉಬೈದ್ ಫೈಝಿ ಪ್ರಾರ್ಥನೆಗೆ ನೇತೃತ್ವ ವಹಿಸಿದರು.</p><p>ವಿವಿಧೆಡೆ ಆಚರಣೆ: ಜಲಾಲೀಯ ಮಸೀದಿ, ಕಲ್ಕಂದೂರು, ಐಗೂರು, ಹೊಸತೋಟ, ಬ್ಯಾಡಗೊಟ್ಟ, ತಣ್ಣೀರುಹಳ್ಳ, ಕಾಗಡಿಕಟ್ಟೆ ಸೇರಿದಂತೆ ಹಲವೆಡೆ ಶುಕ್ರವಾರ ಈದ್ ಆಚರಿಸಿದರು.</p>.<blockquote>ಮಸೀದಿಯಲ್ಲಿ ಪ್ರಾರ್ಥನೆ, ಮನೆಗಳಲ್ಲಿ ಖಾದ್ಯ</blockquote>. <p>ವಿರಾಜಪೇಟೆ : ಒಂದು ತಿಂಗಳಿನ ರಂಜಾನ್ ಉಪವಾಸ ವ್ರತದ ಪರಿಸಮಾಪ್ತಿಯೆಂಬಂತೆ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ನಗರದ ವಿವಿಧ ಮಸೀದಿ ಈದ್ಗಾಗಳಲ್ಲಿ ವಿಶೇಷ ಈದ್ ನಮಾಜ್ ಹಾಗೂ ಪ್ರವಚನ ಆಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಬೆಳಿಗ್ಗೆ ಸೇರಿದ್ದರು. ಪಟ್ಟಣದ ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಧರ್ಮಗುರು ಹ್ಯಾರಿಸ್ ಬಾಖವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಶುಹೈಬ್ ಫೈಝಿ, ಮುರುಡೇಶ್ವರ್ ನವಾಯತ್ ಕ್ಲಾಕ್ ಟವರ್ ಬಾದ್ಶಾ ಮಸೀದಿಯಲ್ಲಿ ಮಖ್ಸೂದ್ ಅಹಮದ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮೊಹಮ್ಮದ್ ಅಲಿ ಬಾಖವಿ, ಪೆರಂಬಾಡಿಯ ಮಸ್ಜಿದುಲ್ ಖಿಝರ್ನಲ್ಲಿ ಮುಸ್ತಫಾ ಫೈಝಿ, ಮೀನುಪೇಟೆಯ ಮಸ್ಜಿದುನ್ನೂರ್ನಲ್ಲಿ ಮಾಹಿನ್ ದಾರಿಮಿ ನೇತೃತ್ವ ನೀಡಿದರು.</p><p>ಗೋಣಿಕೊಪ್ಪಲು ರಸ್ತೆಯ ವಿದ್ಯಾನಗರ ಬ್ರೈಟ್ ಕ್ಯಾಂಪಸ್ ಈದ್ಗಾನಲ್ಲಿ ಧರ್ಮಗುರು ಕೆ.ಎಂ.ಇಬ್ರಾಹಿಮ್, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿ ಈದ್ಗಾನಲ್ಲಿ ಅಸ್ಲಂ ಸಲಫಿ ಪ್ರವಚನ ಮತ್ತು ನಮಾಜ್ಗೆ ನಾಯಕತ್ವ ನೀಡಿದರು. ಈದ್ಗಾಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು.</p> <h2>ಹನಫಿಗಳಿಗೆ ಹಬ್ಬ ಇಂದು </h2><p>ಕೇರಳದಲ್ಲಿ ಗುರುವಾರ ಸಂಜೆ ಶವ್ವಾಲ್ ತಿಂಗಳಿನ ಚಂದ್ರ ದರ್ಶನವಾಗಿದ್ದು ಶಾಫಿ ವಿಭಾಗದವರು ಮಾತ್ರ ಹಬ್ಬ ಆಚರಿಸಿದರು.</p><p>ಹನಫಿ ಮುಸ್ಲಿಮರು ಶನಿವಾರ ಈದುಲ್ ಫಿತ್ರ್ ಆಚರಿಸುವರು. ಶನಿವಾರ ನಡೆಯುವ ಈದ್ ನಮಾಜ್ನಲ್ಲಿ ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಗುಲ್ಶದ್ ಅಹಮದ್, ಸುಣ್ಣದ ಬೀದಿಯ ಮದೀನಾ ಮಸೀದಿಯಲ್ಲಿ ಮುಝಮ್ಮಿಲ್, ಮಸ್ಜಿದ್-ಎ-ಅಝಮ್ನಲ್ಲಿ ಹಸೀಬ್ ಶರೀಫ್ ನಮಾಜ್ಗೆ ಮಾರ್ಗದರ್ಶನ ಮಾಡುವರು.</p> .<blockquote>ಹಿಲಾಲ್ ಮಸೀದಿಯಲ್ಲಿ ಈದ್</blockquote>. <p>--------------------------------</p><p>ಕುಶಾಲನಗರ: ಈದ್ ಉಲ್ ಫಿತ್ರ್ ಅನ್ನು ಶುಕ್ರವಾರ ಹಿಲಾಲ್ ಮಸೀದಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.</p><p>ಮುಸ್ಲಿಂ ಶಾಫಿ ವಿಭಾಗದವರು ಹಬ್ಬದ ಪ್ರಯುಕ್ತ ಬೆಳಿಗ್ಗೆ ಹಿಲಾಲ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಧರ್ಮಗುರು ಶಾಫಿ ಫೈಜಿ ಇರ್ಫಾನಿ ಉಪದೇಶ ನೀಡಿದರು. ಹಬ್ಬದ ಪ್ರಾಮುಖ್ಯ, ಧರ್ಮದ ಪ್ರತಿಯೊಬ್ಬರೂ ದಾನದ ಮಾಡಬೇಕು ಎಂಬ ಬಗ್ಗೆ ಸಂದೇಶ ನೀಡಿದರು. ಪ್ರಾರ್ಥಿಸಿದರು. ಹಿಲಾಲ್ ಮಸೀದಿ ಅಧ್ಯಕ್ಷ ರಫೀಕ್ ಮಾತನಾಡಿ, ಹಸಿದವನ ಬವಣೆ ಅರಿ ಯಲು ಮೂವತ್ತು ದಿನಗಳ ಕಾಲ ವ್ರತಾಚರಣೆ ಮಾಡುತ್ತೇವೆ ಎಂದರು. ಕೂಡಿಗೆ, ನಂಜರಾಯಪಟ್ಟಣ, ಹೊಸಕೋಟೆ, ಶುಂಠಿಕೊಪ್ಪ ಮುಂತಾದೆಡೆಗಳಲ್ಲಿ ಹಬ್ಬವನ್ನು ಆಚರಿಸಲಾಯಿತು.</p><p>ಹಿಲಾಲ್ ಮಸೀದಿ ಕಾರ್ಯದರ್ಶಿ ಕರೀಂ, ಮಸೀದಿ ಕಮಿಟಿ ಪ್ರಮುಖರು, ಸದಸ್ಯರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಸದಸ್ಯರು ಪಾಲ್ಗೊಂಡಿದ್ದರು.</p><p>ಹನಫಿಗಳಿಗೆ ಇಂದು: ಮಾರ್ಚ್ 21 ರಂದು ಶನಿವಾರದಂದು ಹನಫಿ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಿದ್ದು, ಹಬ್ಬದ ಅಂಗವಾಗಿ ಗಂಧಕೋಟೆಯ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯ ಹಲವೆಡೆ ಶುಕ್ರವಾರ ‘ಈದುಲ್ ಫಿತ್ರ್’ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಇನ್ನೂ ಕೆಲವೆಡೆ ಶನಿವಾರ ಹಬ್ಬ ಆಚರಣೆ ನಡೆಯಲಿದ್ದು, ಅದಕ್ಕಾಗಿ ಭರದ ಸಿದ್ಧತೆಗಳನ್ನು ನಡೆಸಿದರು.</p>.<p>ನಗರದ ಬದ್ರಿಯಾ ಮಸೀದಿ ಸೇರಿದಂತೆ ಕೆಲವಾರು ಮಸೀದಿಗಳ ಜನರು ಹಬ್ಬದ ಪ್ರಯುಕ್ತ ಮೆರವಣಿಗೆ ನಡೆಸಿದರು. ತಮ್ಮ ತಮ್ಮ ಮಸೀದಿಗಳಿಂದ ಹೊರಟ ಮೆರವಣಿಗೆಯು ಈದ್ಗಾ ಮೈದಾನ ತಲುಪಿತು. ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಎಲ್ಲರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು, ಆಲಿಂಗಿಸಿ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು</p>.<p>ಎಲ್ಲ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ತಮ್ಮ ತಮ್ಮ ಮನೆಗಳಲ್ಲೂ ಸಡಗರದಿಂದ ಹಬ್ಬ ಆಚರಿಸಿದರು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು.</p>.<p>ಬಿರಿಯಾನಿ ಸೇರಿದಂತೆ ವಿಶೇಷ ಬಗೆಯ ತಿನಿಸುಗಳನ್ನು ತಯಾರಿಸಿ ಬಂಧು, ಬಾಂಧವರು, ಸ್ನೇಹಿತರನ್ನು ಆಹ್ವಾನಿಸಿ ಹಂಚಿಕೊಂಡರು. ಬಡವರಿಗೆ ದಾನ ಮಾಡಿದರು. ಕೆಲಸಕ್ಕಾಗಿ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಎಲ್ಲರೂ ತಮ್ಮ ತಮ್ಮ ಮನೆ ತಲುಪಿದ್ದರು. ತಮ್ಮ ಕುಟುಂಬದವರೊಂದಿಗೆ ಸೇರಿ ಹಬ್ಬ ಆಚರಿಸಿದರು.</p>.<p>ಮಡಿಕೇರಿಯಲ್ಲಿ ಇನ್ನೂ ಕೆಲವರು ಶನಿವಾರ ಹಬ್ಬ ಆಚರಿಸಲಿದ್ದಾರೆ.</p>.<blockquote>ಹೊಸ ಬಟ್ಟೆ ಧರಿಸಿ ಪ್ರಾರ್ಥನೆ</blockquote>. <p>--------------------------------</p><p>ನಾಪೋಕ್ಲು: ಇಲ್ಲಿಯ ಪಟ್ಟಣದ ಮೊಹಿಯುದ್ದಿನ್ ಜುಮ್ಮಾ ಮಸೀದಿ , ಮದೀನ ಮಸೀದಿ, ಸೇರಿದಂತೆ ಸುತ್ತತಲಿನ ಚೆರಿಯಪರಂಬು, ಹಳೆ ತಾಲ್ಲೂಕು, ಎಮ್ಮೆಮಾಡು, ಕುಂಜಿಲ, ಕೊಳಕೇರಿ, ಕೊಟ್ಟಮುಡಿ, ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮುಸ್ಲಿಮರು ಸಂಭ್ರಮದಿಂದ ಈದುಲ್ ಫಿತ್ರ್ ಆಚರಿಸಿದರು.</p><p>ಇಲ್ಲಿಯ ಮೊಹಿಯುದ್ದಿನ್ ಜುಮ್ಮಾ ಮಸೀದಿಯ ಕಾರ್ಯಕ್ರಮದಲ್ಲಿ ಖತೀಬ್ ಉಬೈದ್ ಸಖಾಫಿ ಈದ್ ಸಂದೇಶ ನೀಡಿ ಶಾಂತಿ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಸಾಮೂಹಿಕ ನಮಾಜ್ ಬಳಿಕ ಎಲ್ಲರೂ ಪರಸ್ಪರ ಶುಭಾಶಯ ಹಂಚಿಕೊಂಡರು. ಮರಣ ಹೊಂದಿದವರಿಗೆ ಖಬರ್ ಸ್ಥಾನದಲ್ಲಿ ಝಿಯಾರತ್ ಮತ್ತು ಪ್ರಾರ್ಥನೆ ನಡೆಸಿದರು.</p><p>ಜಮಾಯತ್ ಅಧ್ಯಕ್ಷ ಎಂ.ಎಚ್ ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಪಿ.ಎಂ. ಬದ್ರುದ್ದೀನ್ , ಪಿ.ಎಂ.ಅರಫತ್, ಕಾರ್ಯದರ್ಶಿ ಪಿ.ಎಂ.ಯೂನಸ್, ಖಜಾಂಚಿ ಅಬ್ದುಲ್ ರೆಹಮಾನ್ ಹಾಜಿ., ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮಾಜಿ ಆಡಳಿತ ಮಂಡಳಿ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.</p>.<blockquote>ಖಿಳರಿಯಾ ಮಸೀದಿಯಲ್ಲಿ ಈದ್</blockquote>. <p>ಸೋಮವಾರಪೇಟೆ: ಬಜೆಗುಂಡಿ ಗ್ರಾಮದ ಖಿಳರಿಯಾ ಜುಮಾ ಮಸೀದಿಯಲ್ಲಿ ಮುಸ್ಲಿಮರು ಶುಕ್ರವಾರ ಈದ್ ಉಲ್ ಫಿತ್ರ್ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.</p><p>ಜಮಾಅತ್ ಅಧ್ಯಕ್ಷ ಕೆ.ಎ. ಯಾಕುಬ್ ಮಾತನಾಡಿ, ಎಲ್ಲೆಡೆ ಆವರಿಸಿರುವ ಯುದ್ಧ ಭೀತಿ ಮುಕ್ತಾಯವಾಗಿ ಸರ್ವರೂ ನೆಮ್ಮದಿ, ಶಾಂತಿಯಿಂದ ಜೀವನ ನಡೆಸುವಂತಾಗಲಿ ಎಂದು ಆಶಿಸಿದರು. ಭ ಜಮಾಅತ್ ಖತೀಬ ಉಬೈದ್ ಫೈಝಿ ಪ್ರಾರ್ಥನೆಗೆ ನೇತೃತ್ವ ವಹಿಸಿದರು.</p><p>ವಿವಿಧೆಡೆ ಆಚರಣೆ: ಜಲಾಲೀಯ ಮಸೀದಿ, ಕಲ್ಕಂದೂರು, ಐಗೂರು, ಹೊಸತೋಟ, ಬ್ಯಾಡಗೊಟ್ಟ, ತಣ್ಣೀರುಹಳ್ಳ, ಕಾಗಡಿಕಟ್ಟೆ ಸೇರಿದಂತೆ ಹಲವೆಡೆ ಶುಕ್ರವಾರ ಈದ್ ಆಚರಿಸಿದರು.</p>.<blockquote>ಮಸೀದಿಯಲ್ಲಿ ಪ್ರಾರ್ಥನೆ, ಮನೆಗಳಲ್ಲಿ ಖಾದ್ಯ</blockquote>. <p>ವಿರಾಜಪೇಟೆ : ಒಂದು ತಿಂಗಳಿನ ರಂಜಾನ್ ಉಪವಾಸ ವ್ರತದ ಪರಿಸಮಾಪ್ತಿಯೆಂಬಂತೆ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ನಗರದ ವಿವಿಧ ಮಸೀದಿ ಈದ್ಗಾಗಳಲ್ಲಿ ವಿಶೇಷ ಈದ್ ನಮಾಜ್ ಹಾಗೂ ಪ್ರವಚನ ಆಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಬೆಳಿಗ್ಗೆ ಸೇರಿದ್ದರು. ಪಟ್ಟಣದ ಮುಖ್ಯ ರಸ್ತೆಯ ಶಾಫಿ ಜುಮಾ ಮಸೀದಿಯಲ್ಲಿ ಧರ್ಮಗುರು ಹ್ಯಾರಿಸ್ ಬಾಖವಿ, ಖಾಸಗಿ ಬಸ್ ನಿಲ್ದಾಣದ ಶಾದುಲಿ ಜುಮಾ ಮಸೀದಿಯಲ್ಲಿ ಶುಹೈಬ್ ಫೈಝಿ, ಮುರುಡೇಶ್ವರ್ ನವಾಯತ್ ಕ್ಲಾಕ್ ಟವರ್ ಬಾದ್ಶಾ ಮಸೀದಿಯಲ್ಲಿ ಮಖ್ಸೂದ್ ಅಹಮದ್, ಕಲ್ಲುಬಾಣೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಮೊಹಮ್ಮದ್ ಅಲಿ ಬಾಖವಿ, ಪೆರಂಬಾಡಿಯ ಮಸ್ಜಿದುಲ್ ಖಿಝರ್ನಲ್ಲಿ ಮುಸ್ತಫಾ ಫೈಝಿ, ಮೀನುಪೇಟೆಯ ಮಸ್ಜಿದುನ್ನೂರ್ನಲ್ಲಿ ಮಾಹಿನ್ ದಾರಿಮಿ ನೇತೃತ್ವ ನೀಡಿದರು.</p><p>ಗೋಣಿಕೊಪ್ಪಲು ರಸ್ತೆಯ ವಿದ್ಯಾನಗರ ಬ್ರೈಟ್ ಕ್ಯಾಂಪಸ್ ಈದ್ಗಾನಲ್ಲಿ ಧರ್ಮಗುರು ಕೆ.ಎಂ.ಇಬ್ರಾಹಿಮ್, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿ ಈದ್ಗಾನಲ್ಲಿ ಅಸ್ಲಂ ಸಲಫಿ ಪ್ರವಚನ ಮತ್ತು ನಮಾಜ್ಗೆ ನಾಯಕತ್ವ ನೀಡಿದರು. ಈದ್ಗಾಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು.</p> <h2>ಹನಫಿಗಳಿಗೆ ಹಬ್ಬ ಇಂದು </h2><p>ಕೇರಳದಲ್ಲಿ ಗುರುವಾರ ಸಂಜೆ ಶವ್ವಾಲ್ ತಿಂಗಳಿನ ಚಂದ್ರ ದರ್ಶನವಾಗಿದ್ದು ಶಾಫಿ ವಿಭಾಗದವರು ಮಾತ್ರ ಹಬ್ಬ ಆಚರಿಸಿದರು.</p><p>ಹನಫಿ ಮುಸ್ಲಿಮರು ಶನಿವಾರ ಈದುಲ್ ಫಿತ್ರ್ ಆಚರಿಸುವರು. ಶನಿವಾರ ನಡೆಯುವ ಈದ್ ನಮಾಜ್ನಲ್ಲಿ ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಗುಲ್ಶದ್ ಅಹಮದ್, ಸುಣ್ಣದ ಬೀದಿಯ ಮದೀನಾ ಮಸೀದಿಯಲ್ಲಿ ಮುಝಮ್ಮಿಲ್, ಮಸ್ಜಿದ್-ಎ-ಅಝಮ್ನಲ್ಲಿ ಹಸೀಬ್ ಶರೀಫ್ ನಮಾಜ್ಗೆ ಮಾರ್ಗದರ್ಶನ ಮಾಡುವರು.</p> .<blockquote>ಹಿಲಾಲ್ ಮಸೀದಿಯಲ್ಲಿ ಈದ್</blockquote>. <p>--------------------------------</p><p>ಕುಶಾಲನಗರ: ಈದ್ ಉಲ್ ಫಿತ್ರ್ ಅನ್ನು ಶುಕ್ರವಾರ ಹಿಲಾಲ್ ಮಸೀದಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.</p><p>ಮುಸ್ಲಿಂ ಶಾಫಿ ವಿಭಾಗದವರು ಹಬ್ಬದ ಪ್ರಯುಕ್ತ ಬೆಳಿಗ್ಗೆ ಹಿಲಾಲ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಧರ್ಮಗುರು ಶಾಫಿ ಫೈಜಿ ಇರ್ಫಾನಿ ಉಪದೇಶ ನೀಡಿದರು. ಹಬ್ಬದ ಪ್ರಾಮುಖ್ಯ, ಧರ್ಮದ ಪ್ರತಿಯೊಬ್ಬರೂ ದಾನದ ಮಾಡಬೇಕು ಎಂಬ ಬಗ್ಗೆ ಸಂದೇಶ ನೀಡಿದರು. ಪ್ರಾರ್ಥಿಸಿದರು. ಹಿಲಾಲ್ ಮಸೀದಿ ಅಧ್ಯಕ್ಷ ರಫೀಕ್ ಮಾತನಾಡಿ, ಹಸಿದವನ ಬವಣೆ ಅರಿ ಯಲು ಮೂವತ್ತು ದಿನಗಳ ಕಾಲ ವ್ರತಾಚರಣೆ ಮಾಡುತ್ತೇವೆ ಎಂದರು. ಕೂಡಿಗೆ, ನಂಜರಾಯಪಟ್ಟಣ, ಹೊಸಕೋಟೆ, ಶುಂಠಿಕೊಪ್ಪ ಮುಂತಾದೆಡೆಗಳಲ್ಲಿ ಹಬ್ಬವನ್ನು ಆಚರಿಸಲಾಯಿತು.</p><p>ಹಿಲಾಲ್ ಮಸೀದಿ ಕಾರ್ಯದರ್ಶಿ ಕರೀಂ, ಮಸೀದಿ ಕಮಿಟಿ ಪ್ರಮುಖರು, ಸದಸ್ಯರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಸದಸ್ಯರು ಪಾಲ್ಗೊಂಡಿದ್ದರು.</p><p>ಹನಫಿಗಳಿಗೆ ಇಂದು: ಮಾರ್ಚ್ 21 ರಂದು ಶನಿವಾರದಂದು ಹನಫಿ ಮುಸ್ಲಿಮರು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಿದ್ದು, ಹಬ್ಬದ ಅಂಗವಾಗಿ ಗಂಧಕೋಟೆಯ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>