ಮಡಿಕೇರಿ: ಪರಿಷ್ಕೃತ ಪಠ್ಯಪುಸ್ತಕಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಸಹಮತ ವೇದಿಕೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯಿಂದ ಆಗಿರುವ ಅದ್ವಾನಗಳನ್ನು ಸರಿಪಡಿಸದೆ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಬಾರದು, ಬರಗೂರು ರಾಮಚಂದ್ರಪ್ಪ ಸಮಿತಿ ರೂಪಿಸಿದ ಪಠ್ಯ ಪುಸ್ತಕಗಳನ್ನೆ ಮುಂದುವರಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್ ಆಗ್ರಹಿಸಿದರು.
'ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ನಾಡಗೀತೆಗೆ ಅವಮಾನವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಿರುವ ಮಹಾನ್ ಮಾನವತಾವಾದಿಗಳ ಸಂದೇಶ ಮುಖ್ಯ. ಅದನ್ನು ಬೋಧಿಸಲು ಸರ್ಕಾರ ಮುಂದಾಗಬೇಕು. ಮಕ್ಕಳ ಓದುವ ಮನಸ್ಸುಗಳ ಹಾದಿ ತಪ್ಪಿಸಬಾರದೆಂದು' ಹೇಳಿದರು.
ವೇದಿಕೆಯ ಪದಾಧಿಕಾರಿಗಳಾದ ಮುನೀರ್ ಅಹಮ್ಮದ್, ಲಿಯಾಕತ್ ಆಲಿ, ಅಂಬೆಕಲ್ ಕುಶಾಲಪ್ಪ, ಕೆ.ಜಿ.ಪೀಟರ್ ಇದ್ದರು.