ಹಸಿ ಕಸ, ಒಣ ಕಸದಿಂದ ಸಾವಯುವ ಗೊಬ್ಬರ ಮಾಡುವ ಘಟಕವನ್ನು ಪರಿಶೀಲಿಸಿದ ನಂತರ ಕಸ ವಿಲೇವಾರಿ ಘಟಕ ಬೆಟ್ಟದಲ್ಲಿದ್ದು ಮಳೆಗಾಲದಲ್ಲಿ ಕಸದಿಂದ ನೀರು ಕಲುಷಿತಗೊಳ್ಳುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ಅಳವಡಿಸಿಕೊಂಡಿರುವ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಸರಕ್ಕೆ ಮತ್ತು ಅಂತರ್ಜಲ ಯಾವುದೇ ರೀತಿಯಾಗಿ ಮಾಲಿನ್ಯ ಉಂಟಾಗದಂತಹ ಕಸ ವಿಲೇವಾರಿ ಘಟಕ ನಿರ್ವಹಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಆದ್ದರಿಂದ, ಈ ಕುರಿತು ಮೈಸೂರಿನಿಂದ ತಜ್ಞರನ್ನು ಕರೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿದರು.