ಅ. 18ರಂದು ದಿನೇಶ್ ದೇವಯ್ಯ, ಹೆಮ್ಮತ್ತಾಳು ಗ್ರಾಮದ ಮಾವನ ಮನೆಗೆ ಬಂದಿದ್ದ. 21ರಂದು ಸಂಜೆ ಹೆಮ್ಮತ್ತಾಳು ಗ್ರಾಮದ ಅಯ್ಯಕುಟ್ಟೀರ ರಂಜಿತ್ ಮಾಚಯ್ಯ ಜೊತೆ ಕಾಡುಹಂದಿ ಬೇಟೆಗೆ ಹೋಗಿದ್ದ. ಆಗ ಕಾಡುಹಂದಿ ಬಂತೆಂದು ಭಾವಿಸಿ ಹಾರಿಸಿದ್ದ ಗುಂಡು ರಂಜಿತ್ಗೆ ತಗುಲಿ ಅವರು ಸ್ಥಳದಲ್ಲಿ ಮೃತಪಟ್ಟಿದ್ದರು. ಬಳಿಕ ದೇವಯ್ಯ ತಲೆಮರೆಸಿಕೊಂಡಿದ್ದ.