ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕು ಕಚೇರಿ ಉದ್ಘಾಟಿಸಿದ ಅವರು, ‘ವಯಸ್ಕರು ಇನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆಯಾ ಜಿಲ್ಲಾಡಳಿತದ ಬಳಿ ಎಲ್ಲರ ಆಧಾರ್ ಕಾರ್ಡ್ನ ವಿವರವಿದ್ದು, 60 ವರ್ಷ ತುಂಬಿದ ತಕ್ಷಣ ಅಧಿಕಾರಿಗಳೇ ಮನೆಗೆ ಪತ್ರ ಕಳುಹಿಸಲಿದ್ದಾರೆ. ಅದಕ್ಕಾಗಿ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಲಾಗುತ್ತಿದ್ದು, ಯಾವ ಗ್ರಾಮದಲ್ಲಿ ಯಾರು 60 ವರ್ಷ ತುಂಬಿದವರು ನೆಲೆಸಿದ್ದಾರೆ, ಅವರ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿಯೂ ಗೊತ್ತಾಗಲಿದೆ’ ಎಂದರು.