ತಡರಾತ್ರಿಯವರೆಗೆ ದೇವಾಲಯದಲ್ಲಿ ಕೇರಳದ ಚಂಡೆವಾದ್ಯದೊಂದಿಗೆ ದೀಪಾರಾಧನೆ ನಡೆಯಿತು. ಬೇತು, ಕೈಕಾಡು, ನಾಪೋಕ್ಲು, ಪಾರಾಣೆ, ಕೊಳಕೇರಿ ಮತ್ತಿತರ ಭಾಗಗಳಿಂದ ಉತ್ಸವದ ವೀಕ್ಷಣೆಗೆ ಬಂದಿದ್ದ ಭಕ್ತರು ಭಕ್ತಿಭಾವದಿಂದ ಹರಕೆ ಸಲ್ಲಿಸಿದರು. ವಿವಿಧ ಕೋಲಗಳನ್ನು ಕುತೂಹದಿಂದ ವೀಕ್ಷಿಸಿದರು. ಸಂಜೆ ಬೆಳ್ಳಿಯ ಮುಖವಾಡ ಹೊತ್ತು ಶಾಸ್ತಾವು ದೇವಾಲಯದಲ್ಲಿ ವಿಷ್ಣುಮೂರ್ತಿ ಕೋಲದ ಪ್ರದಕ್ಷಿಣೆ ನಡೆಯಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ, ತಕ್ಕಮುಖ್ಯಸ್ಥ ಕೊಂಡೀರ ಪೊನ್ನಣ್ಣ ವಾರ್ಷಿಕ ಉತ್ಸವದ ನೇತೃತ್ವ ವಹಿಸಿದ್ದರು. ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೆರಿಸಿದರು.