ಈ ಮಾರ್ಗ ಮೈಸೂರು, ತೆಲಚೇರಿ, ಕಣ್ಣೂರು ಕಡೆಗೆ ಹೋಗುತ್ತದೆ. ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆನೆಚೌಕೂರುನಿಂದ ಗೋಣಿಕೊಪ್ಪಲಿನವರೆಗೆ ಸುಮಾರು 17 ಕಿ.ಮೀ ದೂರದವರೆಗೆ ರಸ್ತೆ ಹದಗೆಟ್ಟಿದೆ. ಕಳೆದ ಜುಲೈವರೆಗೆ ಈ ರಸ್ತೆಯು ಸುಸ್ಥಿತಿಯಲ್ಲಿ ಇತ್ತು. ಆನಂತರ ಬಿದ್ದ ಮಳೆಯಿಂದಾಗಿ ಈ ರಸ್ತೆ ಹಾಳಾಗಿತ್ತು. ಮಳೆ ನಿಂತು ತಿಂಗಳುಗಳು ಕಳೆದರೂ ರಸ್ತೆಗೆ ಡಾಂಬರು ಹಾಕಿಲ್ಲ. ಹೀಗಾಗಿ, ವಾಹನ ಸವಾರರು ಹಾಗೂ ಪ್ರಯಾಣಿಕರನ್ನು ಬಲಿ ತೆಗೆದುಕೊಳ್ಳಲು ಸನ್ನದ್ಧವಾಗಿದೆ.