ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಕಾಚರಣೆ ನಡುವೆ ಕಡತ ವಿಲೇವಾರಿ

Last Updated 22 ಜನವರಿ 2019, 14:20 IST
ಅಕ್ಷರ ಗಾತ್ರ

ಮಡಿಕೇರಿ: ಶಿವಕುಮಾರ ಸ್ವಾಮೀಜಿ ಗೌರವಾರ್ಥ ಮಂಗಳವಾರ ರಜೆ ಘೋಷಿಸಿದ್ದರೂ ಇಲ್ಲಿನ ಗೌಳಿಬೀದಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಕಚೇರಿಯಲ್ಲಿ ಕೆಲವು ಸಿಬ್ಬಂದಿಗಳು ಬಾಗಿಲು ಬಂದ್ ಮಾಡಿಕೊಂಡು ಕಡತ ವಿಲೇವಾರಿ ಮಾಡುತ್ತಿದ್ದದ್ದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.

ರಜೆ ನೀಡಿರುವುದು ಗೊತ್ತಿದ್ದರೂ ಐವರು ಸಿಬ್ಬಂದಿ ಮಧ್ಯಾಹ್ನದ ತನವೂ ಕಡತ ವಿಲೇವಾರಿ ಮಾಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಕಂಡೊಡನೆ ಒಬ್ಬ ಸಿಬ್ಬಂದಿ ಹಿಂಬಾಗಿಲು ಮೂಲಕ ಓಡಿ ಹೋಗಿದ್ದಾನೆ. ಬಳಿಕ ಉಳಿದವರು ಕಚೇರಿಗೆ ಬೀಗಹಾಕಿ ತೆರಳಿದ್ದಾರೆ.

‘ರಜೆ ಘೋಷಿಸಿದ್ದರೂ ಸಿಬ್ಬಂದಿಗೆ ಅಂಥ ತುರ್ತು ಕೆಲಸವಾದರೂ ಏನಿತ್ತು? ಯಾವ ಕಾರಣಕ್ಕೆ ಬಾಗಿಲು ಬಂದ್ ಮಾಡಿಕೊಳ್ಳಲಾಗಿತ್ತು’ ಎಂದು ಸಾರ್ವಜನಿಕರು ‍ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT