ನಾಗರಹೊಳೆ ಅರಣ್ಯದ ನಡುವೆ ಹಾದು ಹೋಗಿರುವ ಹುಣಸೂರು, ಗೋಣಿಕೊಪ್ಪಲು ನಡುವಿನ ಅಂತರ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಗುಲ್ ಮೊಹರ್ ಹಾಗೂ ಇತರ ಜಾತಿಯ ಮರಗಳ ಹೂಗಳು ಅರಳಿ ಕಂಗೊಳಿಸುತ್ತಿವೆ. ಪಿರಿಯಾಪಟ್ಟಣ ತಾಲ್ಲೂಕಿನ ಅಳ್ಳೂರಿನಿಂದ ತಿತಿಮತಿವರೆಗಿನ 20 ಕಿ.ಮೀ ಮಾರ್ಗದ ಅರಣ್ಯದ ಗಿಡಮರಗಳ ಚಿಗುರು ಭೂ ದೇವಿಗೆ ಹಸಿರುಡುಗೆ ತೊಡಿಸಿದಂತಿದೆ.