ದೇವಸ್ಥಾನದ ಅರ್ಚಕ ವೆಂಕಟರಮಣ ಭಟ್ ಮಾತನಾಡಿ, ‘ದೇವರಿಗೆ ಹಾಲು, ಮೊಸರು, ತುಪ್ಪ, ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ಎಳನೀರು, ನೀರು... ಹೀಗೆ ಮುಂತಾದ ವಸ್ತುಗಳಿಂದ ದೇವರ ವಿಗ್ರಹಕ್ಕೆ ಅಭಿಷೇಕವನ್ನು ಮಾಡುತ್ತೇವೆ. ವಿಶೇಷ ದಿನದಂದು ದೇವರಿಗೆ ಆಭರಣ ಹಾಗೂ ಹೂವಿನಿಂದ ಶೃಂಗರಿಸಲಾಗುವುದನ್ನು ನೋಡಲು ಭಕ್ತರೂ ಏಕಾದಶಿ ಸಂದರ್ಭ ಬರುತ್ತಾರೆ’ ಎಂದು ತಿಳಿಸಿದರು.