ಕೊಡಗಿನಲ್ಲಿ ಪರಿಸರ ಸೂಕ್ಷ್ಮ ವಲಯದ ರಚನೆ, ಕಸ್ತೂರಿ ರಂಗನ್ ಸಮಿತಿ ವರದಿಯ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಜನರನ್ನು ನಂಬಿಸಿದ್ದ ಸಂಸದ ಪ್ರತಾಪ ಸಿಂಹ, ನಂತರದ ದಿನದಲ್ಲಿ ಹೇಳಿಕೆ ವಿರುದ್ಧವಾಗಿ ನಡೆದುಕೊಂಡರು. ವಿದೇಶದಿಂದ ಕರಿಮೆಣಸು ಆಮದಿನಿಂದ ಇಲ್ಲಿನ ಕಾಳುಮೆಣಸು ಬೆಳೆಗಾರರ ಜೀವನ ಅಧೋಗತಿಗೆ ತಲುಪಿದೆ. ಗೋಣಿಕೊಪ್ಪಲಿನ ಎಪಿಎಂಸಿಯಲ್ಲಿ ನಡೆದಿದ್ದ ಪ್ರಕರಣವೇ ಹಗರಣಕ್ಕೆ ಸಾಕ್ಷಿಯಾಗಿದ್ದು, ಇದಕ್ಕೆಲ್ಲ ನೇರ ಹೊಣೆ ಬಿಜೆಪಿ ಎಂದು ಆರೋಪಿಸಿದರು.