ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ ಮಾತನಾಡಿ ’ನಾಪೋಕ್ಲುವಿನ ಬೇತು ಗ್ರಾಮದ ರುದ್ರಭೂಮಿಯನ್ನು ಅತಿಕ್ರಮಣ ಮಾಡಿ, ಯಾರ ಗಮನಕ್ಕೂ ತಾರದೆ, ಟೆಂಡರ್ ಸಹ ಕರೆಯದೆ, ಅಲ್ಲಿದ್ದ ಮರಗಳನ್ನು ಕಡಿದು ಸಾಗಿಸಲಾಗಿದೆ. ಅಲ್ಲದೇ, ರುದ್ರಭೂಮಿಯಲ್ಲಿ ಬೃಹತ್ ಗುಂಡಿಯನ್ನು ತೋಡಿ ಅಲ್ಲಿ ಹೂತಿದ್ದ ಶವಗಳನ್ನು ಬೇರೆಡೆಗೆ ಎಸೆಯಲಾಗಿದೆ. ಈ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಅಮಾನುಷ ಕೃತ್ಯ ಖಂಡನೀಯ‘ ಎಂದರು.