ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಹೆಮ್ಮೆತ್ತಾಳು ಗ್ರಾಮದ ನಿವಾಸಿಗಳಿಗೆ ಇನ್ನು ಮನೆಗಳು ವಿತರಣೆಯಾಗದೇ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಸಂದರ್ಭ ಸರ್ಕಾರ ಬಾಡಿಗೆ ಮನೆಯಲ್ಲಿರುವಂತೆ ಸೂಚಿಸಿ ತಿಂಗಳಿಗೆ ಸಾವಿರದಂತೆ 3 ತಿಂಗಳು ಬಾಡಿಗೆ ಹಣ ನೀಡಿತ್ತು. ಆದರೆ, ಇದೀಗ ಏಕಾಏಕಿ ಸಂತ್ರಸ್ತರ ಪಟ್ಟಿಯಿಂದ ಹೆಸರು ತೆಗೆಯಲಾಗಿದೆ ಎಂದು ಆರೋಪಿಸಿದರು.