ದೇವಸ್ಥಾನ ಸಮಿತಿಯ ಪೊನ್ನಪ್ಪ ಮಾತನಾಡಿ, ‘ಹಿಂದಿನ ಕಾಲದಲ್ಲಿ ಕೊಡಗಿಗೆ ಬಂದು ಪೂಜೆ ಸಲ್ಲಿಸಿ ಕೊಡಗಿನ ರಾಜರನ್ನು ಉತ್ಸವಕ್ಕೆ ಆಹ್ವಾನಿಸಲಾಗುತ್ತಿತ್ತು. ನಂತರ, ಈ ಸಂಪ್ರದಾಯ ಕಣ್ಮರೆಯಾಗಿತ್ತು. ಕೇರಳದಲ್ಲಿ ಅಷ್ಟಮಂಗಲ ಪ್ರಶ್ನೆಯಿಟ್ಟಾಗ ಸಂಪ್ರದಾಯ ಬಿಟ್ಟಿರುವುದೇ ಕೊಡಗಿನ ಪರಿಸ್ಥಿತಿಗೆ ಕಾರಣ ಎಂಬುದು ತಿಳಿದುಬಂದಿತ್ತು. ಈಗ ರಾಜ ಆಳ್ವಿಕೆ ಇಲ್ಲ. ಜಿಲ್ಲಾಧಿಕಾರಿ ಪ್ರಮುಖರು. ಹೀಗಾಗಿ ಅವರನ್ನು ಆಹ್ವಾನಿಸುತ್ತಿದ್ದೇವೆ. ಕೊಡಗಿನ ಪರಿಸ್ಥಿತಿ ಸುಧಾರಿಸಲಿ’ ಎಂದು ಹೇಳಿದರು.