‘ಪರ್ಯಾಯ ರಾಜಕಾರಣದ ಭಾಗವಾಗಿ ದೇವನೂರು ಮಹಾದೇವ, ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಅವರನ್ನೆಲ್ಲ ಸೇರಿಸಿ ನಾವು ಜನಾಂದೋಲನ ಮಹಾಮೈತ್ರಿ (ಜೆಎಂಎಂ)ಯನ್ನು ಮಾಡಿಕೊಂಡಿದ್ದೆವು. ಸುಮಾರು 20 ಕ್ಷೇತ್ರಗಳಲ್ಲಿ ಸಚ್ಚಾರಿತ್ರ್ಯವಿರುವ ಅಭ್ಯರ್ಥಿಗಳನ್ನೇ ಚುನಾವಣೆಗೆ ನಿಲ್ಲಿಸಿದ್ದೆವು. ಆದರೂ ಜನರು ಅವರನ್ನು ಆಯ್ಕೆ ಮಾಡದೇ ಇರುವುದು ಬೇಸರ ಮೂಡಿಸಿದೆ’ ಎಂದು ಎಸ್.ಆರ್. ಹಿರೇಮಠ ಕಳವಳ ವ್ಯಕ್ತಪಡಿಸಿದರು.