‘ಹಿಂದೆ ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಗದ್ದೆಗಳು ಉಳುಮೆಯಾಗಿ, ಭತ್ತದ ಸಸಿ ಮಡಿಗಳು ಸಿದ್ಧವಾಗುತ್ತಿದ್ದವು. ಈಚೆಗೆ ಕಾರ್ಮಿಕರ ಕೊರತೆ, ಬದಲಾದ ಹವಾಮಾನ, ಕುಂಠಿತಗೊಳ್ಳುವ ಇಳುವರಿ, ಉತ್ಪಾದನೆಗೆ ಅಧಿಕ ಖರ್ಚು ಮತ್ತಿತರ ಕಾರಣಗಳಿಂದ ಬೆಳೆಗಾರರು ಭತ್ತದ ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ಹವಾಮಾನದ ಏರುಪೇರು ಸಹ ಭತ್ತದ ಬೇಸಾಯಗಾರರನ್ನು ಕಂಗೆಡಿಸಿದೆ. ಯಾರೂ ಶ್ರಮ ವಹಿಸಲು ಸಿದ್ದರಿಲ್ಲ’ ಎಂದು ಬೇತು ಗ್ರಾಮದ ರೈತ ಸೋಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.