ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಇಲ್ಲಿನ ಹರಿಹರ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಮಂಗಳವಾರ ನಡೆದ ಷಷ್ಠಿ ಉತ್ಸವದಲ್ಲಿ ವ್ಯಾಪಾರಕ್ಕೆಂದು ಬಂದಿದ್ದ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಬಜರಂಗದಳದ ಕಾರ್ಯಕರ್ತರು ವಾಪಸ್ ಕಳುಹಿಸಿದರು.
‘ಕೇಸರಿ ಶಾಲು ಧರಿಸಿದ ಕಾರ್ಯಕರ್ತರು ವ್ಯಾಪಾರಿಗಳ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿದ್ದಾಗ ಮುಸ್ಲಿಂ ವ್ಯಾಪಾರಿಯು ತಮ್ಮ ಗೆಳೆಯನ ಗುರುತಿನ ಚೀಟಿ ತೋರಿಸಿದರೆಂದು ವ್ಯಾಪಾರಕ್ಕೆ ನಿರಾಕರಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.
‘ಘಟನೆ ಕುರಿತು ದೇಗುಲದ ಟ್ರಸ್ಟಿಗಳಾಗಲಿ, ವ್ಯಾಪಾರಿಗಳಾಗಲಿ ದೂರು ನೀಡಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಉತ್ಸವದಲ್ಲಿ ಎಲ್ಲ ಧರ್ಮದವರಿಗೂ ವ್ಯಾಪಾರಕ್ಕೆ ಅವಕಾಶವಿದೆ’ ಎಂದು ದೇಗುಲ ಮೊದಲೆ ಸ್ಪಷ್ಟಪಡಿಸಿತ್ತು.