ಇಲ್ಲಿನ ಪೆನ್ಷನ್ಲೈನ್ ನಿವಾಸಿ ಶೇಷಪ್ಪ ರೈ ಎಂಬುವವರು ಯಾವುದೋ ಕೆಲಸದ ಸಲುವಾಗಿ ಏಪ್ರಿಲ್ 23ರಂದು ಅಬ್ದುಲ್ಲ ಅವರಿಗೆ ಕರೆ ಮಾಡಿದರು. ಆಗ ಕರೆಯನ್ನು ಕಟ್ ಮಾಡಲು ಹೋದ ಅಬ್ದುಲ್ಲ ಅವರು ಕರೆ ಸ್ವೀಕರಿಸಿದರು. ಇದರ ಪರಿವೆ ಇಲ್ಲದ ಅಬ್ದುಲ್ಲ ಹಾಗೂ ಮುಸ್ತಾಫ 3 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ಮಡಿಕೇರಿಯಲ್ಲಿ 50 ಕಡೆ ಪೆಟ್ರೊಲ್ ಬಾಂಬ್ ಹಾಕಿ ಇಡೀ ಮಡಿಕೇರಿಯನ್ನೇ ಹೊತ್ತಿ ಉರಿಸಬೇಕು. ಇದಕ್ಕೆ ದುಡ್ಡಿರುವವರು ₹ 50 ಸಾವಿರದಿಂದ ₹ 1 ಲಕ್ಷ ಹಾಕಬೇಕು ಎಂದು ಮಾತನಾಡಿಕೊಂಡಿದ್ದಾರೆ ಎಂದು ಆರೋಪಿಸಿ ಶೇಷಪ್ಪ ದೂರು ನೀಡಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.