ಕಳೆ ನಿರ್ಮೂಲನೆ ಮಾಡುವ ಹೆರತೆ ಕೆಲಸ, ಕಾಫಿ ಕೊಯ್ಲು ಸೇರಿದಂತೆ ಹತ್ತು ಹಲವು ಕೆಲಸ ಕಾರ್ಯಗಳಿಗೆ ಮಳೆಯಿಂದಾಗಿ ಅಡ್ಡಿಯಾಗಿದೆ. ನಾಪೋಕ್ಲು ಹೋಬಳಿ ವ್ಯಾಪ್ತಿಯ ಕಕ್ಕಬೆ, ನೆಲಜಿ, ಬಲಮಾವಟಿ, ಪುಲಿಕೋಟು, ಪೇರೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಅರೇಬಿಕಾ ಕಾಫಿಯ ಕೊಯ್ಲು ಮಾಡಲಾಗಿದ್ದು ಅವನ್ನು ಒಣಗಿಸಲು ಬೆಳೆಗಾರರು ಪರದಾಡುವಂತೆ ಆಗಿದೆ.