ಮಡಿಕೇರಿ: ಮಡಿಕೇರಿ ನಗರವೂ ಸೇರಿದಂತೆ ಸುತ್ತಮುತ್ತಪ್ರದೇಶದಲ್ಲಿ ಮಂಗಳವಾರ ಸಂಜೆ 15 ನಿಮಿಷ ಉತ್ತಮ ಮಳೆ ಸುರಿಯಿತು.
ಇಡೀ ದಿನ ಬಿಸಿಲ ವಾತಾವರಣವಿತ್ತು. ಸಂಜೆ ವೇಳೆಗೆ ಮಳೆ ಸುರಿಯಿತು. ಜಿಲ್ಲೆಯ ಉಳಿದ ಭಾಗದಲ್ಲಿ ತುಂತುರು ಮಳೆ ಸುರಿದಿದೆ. ಭತ್ತದ ಸಸಿ ಮಡಿ ತಯಾರಿಗಾಗಿ ಜಿಲ್ಲೆಯ ರೈತರು ಜೋರು ಮಳೆಯ ನಿರೀಕ್ಷೆಯಲ್ಲಿದ್ದಾರೆ.