ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಹೊದಿಸಿ ಅಂತ್ಯಸಂಸ್ಕಾರದ ಸ್ಥಳಕ್ಕೆ ಸೇನಾಧಿಕಾರಿಗಳು ಕೊಂಡೊಯ್ದರು. ಸೇನೆಯ ಉತ್ತರ ವಲಯ, ದಕ್ಷಿಣ ವಲಯ ಹಾಗೂ ಸೇನಾ ಮುಖ್ಯಸ್ಥರ ಪರವಾಗಿ ಲೆಫ್ಟಿನೆಂಟ್ ಕರ್ನಲ್ ದಿನೇಶ್ ಕುಮಾರ್ ಹಾಗೂ ಕರ್ನಲ್ ಬೆಳ್ಯಪ್ಪ ಅವರು ಪುಷ್ಪ ನಮನ ಸಲ್ಲಿಸಿದರು. ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವವನ್ನು ದಿನೇಶ್ಕುಮಾರ್ ಅವರು ನಂದ ಅವರ ಪತ್ನಿ ಲೀಲಾ ಅವರಿಗೆ ಹಸ್ತಾಂತರಿಸಿದರು. ಕುಶಾಲು ತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.