ಜವಾಬ್ದಾರಿಯುತ ಕೊಡಗಿನ ನಾಗರಿಕರು ತಮ್ಮ ವ್ಯಾಪ್ತಿಯ ಪ್ರಾಕೃತ್ತಿಕ ಸಂಪತ್ತನ್ನು ರಕ್ಷಿಸುವುದು ಕರ್ತವ್ಯ ಕೂಡ ಆಗಿದೆ. ಈ ನಿಟ್ಟಿನಲ್ಲಿ ಸುಲಭ ಪರಿಹಾರೋಪಾಯವಾಗಿ ಕಂಡುಬರುತ್ತಿರುವುದೇ ಲಾವಂಚ ಹುಲ್ಲು ನಾಟಿ ಎಂದು ಅಭಿಪ್ರಾಯಪಟ್ಟಿರುವ ಯುವವಿಜ್ಞಾನಿಗಳು, ಕೊಡಗಿನ ಬೆಟ್ಟ ಗುಡ್ಡಗಳಲ್ಲಿ ಲಾವಂಚ ಹುಲ್ಲನ್ನು ನೆಡುವುದರಿಂದ ಲಾವಂಚ ಹುಲ್ಲಿನ ಮೂಲಕ ಮಣ್ಣಿನ ಕುಸಿತ ತಡೆಯಲು ಸಾಧ್ವವಿದೆ. ಅಂತೆಯೇ ಲಾವಂಚಕ್ಕೆ ಮಣ್ಣಿನ ಸವಕಳಿಯನ್ನು ತಡೆಗಟ್ಟಿ, ಮಣ್ಣಿನ ಫಲವತ್ತತೆಗೂ ಕಾರಣವಾಗಬಲ್ಲದು. ಲಾವಂಚ ಹುಲ್ಲಿಗೆ ಮಣ್ಣನ್ನು ಭದ್ರವಾಗಿ ತಡೆಹಿಡಿಯಬಲ್ಲ ಶಕ್ತಿಯಿದೆ. ಇದರಿಂದ ಲಾವಂಚ ಹುಲ್ಲು ಇದ್ದಲ್ಲಿ ಖಂಡಿತವಾಗಿಯೂ ಬರೆ ಕುಸಿತ ಸಂಭವಿಸುವುದಿಲ್ಲ ಎಂದು ಅನೇಕ ಉದಾಹರಣೆಗಳು ತಿಳಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.