<p>ಮಡಿಕೇರಿ: ಇಲ್ಲಿನ ಐತಿಹಾಸಿಕ ಶಾಂತಿ ಚರ್ಚ್ನಲ್ಲಿ ಶತಮಾನೋತ್ತರ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ವಿಶೇಷ ಆರಾಧನೆ ನಡೆಯಿತು. ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್ ಅವರು ಭಾಗಿಯಾಗಿ ಭಕ್ತರಿಗೆ ಆಶೀರ್ವಚನ ನೀಡಿದರು.</p>.<p>ಇದಕ್ಕೂ ಮುನ್ನ ಶಾಂತಿ ಚರ್ಚ್ನಿಂದ ಹೊರಟ ಮೆರವಣಿಗೆಯು ಜನರಲ್ ತಿಮ್ಮಯ್ಯ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಶಾಂತಿ ಸಂದೇಶ ಹೊತ್ತ ಈ ಮೆರವಣಿಗೆಯಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮಲ್ಪೆಯಿಂದ ಬಂದಿದ್ದ ‘ಸೌಂಡ್ ಆಫ್ ಮ್ಯೂಸಿಕ್’ ತಂಡದ ‘ಬ್ರಾಸ್ ಬ್ಯಾಂಡ್’ ಮೆರವಣಿಗೆಗೆ ಮೆರುಗು ತುಂಬಿತು.</p>.<p>ಬಳಿಕ ಚರ್ಚ್ನಲ್ಲಿ ವಿಶೇಷ ಆರಾಧನೆ ನಡೆಯಿತು. ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್ ಮಾತನಾಡಿ, ‘ನೀವೇ ದೇವರ ಆಲಯ. ಎಲ್ಲರೂ ಶುದ್ಧತ್ವವನ್ನು ಕಾಪಾಡಿಕೊಳ್ಳಬೇಕು. ಶಾಂತಿ ಸೌಹಾರ್ದತೆಯಿಂದ ಸಮಾಜದಲ್ಲಿ ಬಾಳಬೇಕು’ ಎಂದು ಸಂದೇಶ ನೀಡಿದರು.</p>.<p>ಚರ್ಚ್ನಲ್ಲಿ ಹಿಂದೆ ತಂಗಿದ್ದ ಹರ್ಮನ್ ಮೋಗ್ಲಿಂಗ್ ಹಾಗೂ ಎಫ್.ಕಿಟ್ಟೆಲ್ರ ಕೊಡುಗೆಗಳನ್ನು ಇದೇ ವೇಳೆ ಅವರು ಸ್ಮರಿಸಿದರು.</p>.<p>ಸ್ಮರಣ ಸಂಚಿಕೆಯ ಕಾರ್ಯದರ್ಶಿ ಜೋಯ್ಸಿ ವಿನಯ ಅವರು ಶಾಂತಿ ಚರ್ಚ್ನ ಇತಿಹಾಸವನ್ನು ಸವಿಸ್ತಾರವಾಗಿ ವಿವರಿಸಿದರು. ಇಲ್ಲಿದ್ದ ಮಿಷನರಿಗಳ ಕೊಡುಗೆಯನ್ನು ಸ್ಮರಿಸಿದರು. ಚರ್ಚ್ ಸ್ಥಾಪನೆಯಾದಾಗಿನಿಂದ ನಡೆದು ಬಂದ ಹಾದಿಯ ಸಿಂಹಾವಲೋಕನ ಮಾಡಿದರು.</p>.<p>80 ವರ್ಷ ಪೂರೈಸಿದ ಚರ್ಚ್ನ ಹಿರಿಯ ಸದಸ್ಯರನ್ನು ಸನ್ಮಾನಿಲಾಯಿತು. ಪ್ರೀತು ರಿಚರ್ಡ್ ವಂದಿಸಿದರು. ಜೈಕುಮಾರ್ ಡೆಫ್ಟನ್ ನಿರೂಪಿಸಿದರು.</p>.<p>ಚರ್ಚ್ನಲ್ಲಿ ಸೇವೆ ಸಲ್ಲಿಸಿದ ಸಭಾಪಾಲಕರು ಹಾಗೂ ಮತ್ತು ಅವರ ಕುಟುಂಬದವರೊಂದಿಗೆ ಆಧ್ಯಾತ್ಮಿಕ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವೂ ನಡೆಯಿತು.</p>.<p>ಈ ಹಿಂದೆ ಇಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಭಾಗವಹಿಸಿ ಸಂದೇಶ ನೀಡಿದರು. ಕೊಡಗು ಜಿಲ್ಲೆಯ ಇತರೆ ಸಿಎಸ್ಐ ಚರ್ಚ್ಗಳ ಧರ್ಮಗುರುಗಳು ಹಾಗೂ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p>ಕೆಎಸ್ಡಿ ಉಪಾಧ್ಯಕ್ಷರಾದ ಸಿಸ್ಟರ್ ಸುಜಾತಾ, ಕಾರ್ಯದರ್ಶಿ ವಿಲಿಯಂ ಕೇರಿ, ಖಜಾಂಚಿ ವಿನ್ಸೆಂಟ್ ವಾಲನ್, ಚರ್ಚ್ನ ಧರ್ಮಗುರು ಅಮೃತರಾಜ್ ಖೋಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಇಲ್ಲಿನ ಐತಿಹಾಸಿಕ ಶಾಂತಿ ಚರ್ಚ್ನಲ್ಲಿ ಶತಮಾನೋತ್ತರ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ವಿಶೇಷ ಆರಾಧನೆ ನಡೆಯಿತು. ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್ ಅವರು ಭಾಗಿಯಾಗಿ ಭಕ್ತರಿಗೆ ಆಶೀರ್ವಚನ ನೀಡಿದರು.</p>.<p>ಇದಕ್ಕೂ ಮುನ್ನ ಶಾಂತಿ ಚರ್ಚ್ನಿಂದ ಹೊರಟ ಮೆರವಣಿಗೆಯು ಜನರಲ್ ತಿಮ್ಮಯ್ಯ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಶಾಂತಿ ಸಂದೇಶ ಹೊತ್ತ ಈ ಮೆರವಣಿಗೆಯಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮಲ್ಪೆಯಿಂದ ಬಂದಿದ್ದ ‘ಸೌಂಡ್ ಆಫ್ ಮ್ಯೂಸಿಕ್’ ತಂಡದ ‘ಬ್ರಾಸ್ ಬ್ಯಾಂಡ್’ ಮೆರವಣಿಗೆಗೆ ಮೆರುಗು ತುಂಬಿತು.</p>.<p>ಬಳಿಕ ಚರ್ಚ್ನಲ್ಲಿ ವಿಶೇಷ ಆರಾಧನೆ ನಡೆಯಿತು. ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್ ಮಾತನಾಡಿ, ‘ನೀವೇ ದೇವರ ಆಲಯ. ಎಲ್ಲರೂ ಶುದ್ಧತ್ವವನ್ನು ಕಾಪಾಡಿಕೊಳ್ಳಬೇಕು. ಶಾಂತಿ ಸೌಹಾರ್ದತೆಯಿಂದ ಸಮಾಜದಲ್ಲಿ ಬಾಳಬೇಕು’ ಎಂದು ಸಂದೇಶ ನೀಡಿದರು.</p>.<p>ಚರ್ಚ್ನಲ್ಲಿ ಹಿಂದೆ ತಂಗಿದ್ದ ಹರ್ಮನ್ ಮೋಗ್ಲಿಂಗ್ ಹಾಗೂ ಎಫ್.ಕಿಟ್ಟೆಲ್ರ ಕೊಡುಗೆಗಳನ್ನು ಇದೇ ವೇಳೆ ಅವರು ಸ್ಮರಿಸಿದರು.</p>.<p>ಸ್ಮರಣ ಸಂಚಿಕೆಯ ಕಾರ್ಯದರ್ಶಿ ಜೋಯ್ಸಿ ವಿನಯ ಅವರು ಶಾಂತಿ ಚರ್ಚ್ನ ಇತಿಹಾಸವನ್ನು ಸವಿಸ್ತಾರವಾಗಿ ವಿವರಿಸಿದರು. ಇಲ್ಲಿದ್ದ ಮಿಷನರಿಗಳ ಕೊಡುಗೆಯನ್ನು ಸ್ಮರಿಸಿದರು. ಚರ್ಚ್ ಸ್ಥಾಪನೆಯಾದಾಗಿನಿಂದ ನಡೆದು ಬಂದ ಹಾದಿಯ ಸಿಂಹಾವಲೋಕನ ಮಾಡಿದರು.</p>.<p>80 ವರ್ಷ ಪೂರೈಸಿದ ಚರ್ಚ್ನ ಹಿರಿಯ ಸದಸ್ಯರನ್ನು ಸನ್ಮಾನಿಲಾಯಿತು. ಪ್ರೀತು ರಿಚರ್ಡ್ ವಂದಿಸಿದರು. ಜೈಕುಮಾರ್ ಡೆಫ್ಟನ್ ನಿರೂಪಿಸಿದರು.</p>.<p>ಚರ್ಚ್ನಲ್ಲಿ ಸೇವೆ ಸಲ್ಲಿಸಿದ ಸಭಾಪಾಲಕರು ಹಾಗೂ ಮತ್ತು ಅವರ ಕುಟುಂಬದವರೊಂದಿಗೆ ಆಧ್ಯಾತ್ಮಿಕ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವೂ ನಡೆಯಿತು.</p>.<p>ಈ ಹಿಂದೆ ಇಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಭಾಗವಹಿಸಿ ಸಂದೇಶ ನೀಡಿದರು. ಕೊಡಗು ಜಿಲ್ಲೆಯ ಇತರೆ ಸಿಎಸ್ಐ ಚರ್ಚ್ಗಳ ಧರ್ಮಗುರುಗಳು ಹಾಗೂ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<p>ಕೆಎಸ್ಡಿ ಉಪಾಧ್ಯಕ್ಷರಾದ ಸಿಸ್ಟರ್ ಸುಜಾತಾ, ಕಾರ್ಯದರ್ಶಿ ವಿಲಿಯಂ ಕೇರಿ, ಖಜಾಂಚಿ ವಿನ್ಸೆಂಟ್ ವಾಲನ್, ಚರ್ಚ್ನ ಧರ್ಮಗುರು ಅಮೃತರಾಜ್ ಖೋಡೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>