<p>ಸಿದ್ದಾಪುರ: ಇಂಜಿಲಗೆರೆ ಗ್ರಾಮದ ಅಯ್ಯಪ್ಪ ದೇವಾಲಯದ ಸಭಾಂಗಣದಲ್ಲಿ ಈಚೆಗೆ ಉಚಿತ ಆರೋಗ್ಯ ಶಿಬಿರ ನಡೆಯಿತು.</p>.<p>ಎಸ್.ಎನ್.ಡಿ.ಪಿ. ಜಿಲ್ಲಾ ವನಿತಾ ಸಂಘಟನೆ, ಎಸ್ ಎನ್.ಡಿ.ಪಿ ಇಂಜಿಲಗೆರೆ ಗೌರಿ ಶಾಖೆ ಹಾಗೂ ಮೂರ್ನಾಡುವಿನ ಕೊಡಗು ಆಯುರ್ವೇದಿಕ್ ಕೇರ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿಬಿರವನ್ನು ಎಸ್ ಎನ್.ಡಿ.ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ .ಕೆ ಲೋಕೇಶ್ ಉದ್ಘಾಟಿಸಿದರು.</p>.<p>ಆಯುರ್ವೇದ ಚಿಕಿತ್ಸೆಯಿಂದ ನೈಸರ್ಗಿಕ ಗಿಡಮೂಲಿಕೆಗಳಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದಾಗಿದೆ. ಇದೀಗ ವಿದೇಶದಲ್ಲೂ ಆಯುರ್ವೇದ ಚಿಕಿತ್ಸೆ ಹೆಸರುವಾಸಿಯಾಗಿದೆ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಎಸ್. ಎನ್ .ಡಿ .ಪಿ ವನಿತಾ ಸಂಘದ ಜಿಲ್ಲಾ ಅಧ್ಯಕ್ಷೆ ರೀಶಾ ಸುರೇಂದ್ರನ್ ಮಾತನಾಡಿ, ಎಲ್ಲರ ಆರೋಗ್ಯ ಕ್ಕಾಗಿ ಸಂಘಟನೆಯಿಂದ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಪಾಸಣೆ ಮಾಡಿಸಲು ಸಲಹೆ ನೀಡಿದರು.</p>.<p>ಮೂರ್ನಾಡು ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಜೈಸನ್, ವೈದ್ಯರಾದ ಡಾ. ಅನೂಪ್, ಡಾ.ದೀಪಿತ,ಇಂಜಿಲಗೆರೆ ಶಾಲೆಯ ಅಧ್ಯಕ್ಷ ಹರಿದಾಸ್ ಪಿ. ಜಿ., ಉಪಾಧ್ಯಕ್ಷ ಮಣಿಲಾಲ್, ಕಾರ್ಯದರ್ಶಿ ಎಂ.ಜಿ. ರಾಜು, ಅನಿತಾ ಮಣಿಲಾಲ್ , ಖಜಾಂಚಿ ಧರ್ಮಜ, ಗ್ರಾಮದ ಪ್ರಮುಖರಾದ ಕೋಡಿರ ಕುಶೀ ಭೀಮಯ್ಯ, ಸುಗದನ್, ಸುರೇಶ್ ಪಿ .ಎಸ್ ಹಾಜರಿದ್ದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-51-1652267794</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿದ್ದಾಪುರ: ಇಂಜಿಲಗೆರೆ ಗ್ರಾಮದ ಅಯ್ಯಪ್ಪ ದೇವಾಲಯದ ಸಭಾಂಗಣದಲ್ಲಿ ಈಚೆಗೆ ಉಚಿತ ಆರೋಗ್ಯ ಶಿಬಿರ ನಡೆಯಿತು.</p>.<p>ಎಸ್.ಎನ್.ಡಿ.ಪಿ. ಜಿಲ್ಲಾ ವನಿತಾ ಸಂಘಟನೆ, ಎಸ್ ಎನ್.ಡಿ.ಪಿ ಇಂಜಿಲಗೆರೆ ಗೌರಿ ಶಾಖೆ ಹಾಗೂ ಮೂರ್ನಾಡುವಿನ ಕೊಡಗು ಆಯುರ್ವೇದಿಕ್ ಕೇರ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿಬಿರವನ್ನು ಎಸ್ ಎನ್.ಡಿ.ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ .ಕೆ ಲೋಕೇಶ್ ಉದ್ಘಾಟಿಸಿದರು.</p>.<p>ಆಯುರ್ವೇದ ಚಿಕಿತ್ಸೆಯಿಂದ ನೈಸರ್ಗಿಕ ಗಿಡಮೂಲಿಕೆಗಳಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದಾಗಿದೆ. ಇದೀಗ ವಿದೇಶದಲ್ಲೂ ಆಯುರ್ವೇದ ಚಿಕಿತ್ಸೆ ಹೆಸರುವಾಸಿಯಾಗಿದೆ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಎಸ್. ಎನ್ .ಡಿ .ಪಿ ವನಿತಾ ಸಂಘದ ಜಿಲ್ಲಾ ಅಧ್ಯಕ್ಷೆ ರೀಶಾ ಸುರೇಂದ್ರನ್ ಮಾತನಾಡಿ, ಎಲ್ಲರ ಆರೋಗ್ಯ ಕ್ಕಾಗಿ ಸಂಘಟನೆಯಿಂದ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಪಾಸಣೆ ಮಾಡಿಸಲು ಸಲಹೆ ನೀಡಿದರು.</p>.<p>ಮೂರ್ನಾಡು ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಜೈಸನ್, ವೈದ್ಯರಾದ ಡಾ. ಅನೂಪ್, ಡಾ.ದೀಪಿತ,ಇಂಜಿಲಗೆರೆ ಶಾಲೆಯ ಅಧ್ಯಕ್ಷ ಹರಿದಾಸ್ ಪಿ. ಜಿ., ಉಪಾಧ್ಯಕ್ಷ ಮಣಿಲಾಲ್, ಕಾರ್ಯದರ್ಶಿ ಎಂ.ಜಿ. ರಾಜು, ಅನಿತಾ ಮಣಿಲಾಲ್ , ಖಜಾಂಚಿ ಧರ್ಮಜ, ಗ್ರಾಮದ ಪ್ರಮುಖರಾದ ಕೋಡಿರ ಕುಶೀ ಭೀಮಯ್ಯ, ಸುಗದನ್, ಸುರೇಶ್ ಪಿ .ಎಸ್ ಹಾಜರಿದ್ದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-51-1652267794</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>