2018 ರಲ್ಲಿ ಭೂಮಿ ಬಿರುಕು ಬಿಟ್ಟಿದ್ದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಲಾಗಿದ್ದು, ಈ ಭಾಗದಲ್ಲಿ ಈ ಬಾರಿ ಭೂಮಿ ಬಿರುಕು ಬಿಟ್ಟಿಲ್ಲ ಎಂದು ಅವರು ಹೇಳಿದ್ದಾರೆ. ‘ಭೂಕಂಪನ ಸಂಭವಿಸಿದ್ದಲ್ಲಿ ಸಾರ್ವಜನಿಕರು ಗಾಬರಿಯಾಗದೆ ಮನೆ ಯಿಂದ ಹೊರಬರಬೇಕು, ವಿದ್ಯುತ್ ಮತ್ತು ಅಡುಗೆ ಅನಿಲ ಕಡಿತಗೊಳಿ ಸಬೇಕು (ಆಫ್ ಮಾಡುವುದು), ಕಟ್ಟಡದ ಚಾವಣಿಯಲ್ಲಿ ಹೆಚ್ಚಿನ ಭಾರ ಇರದಂತೆ ಗಮನಹರಿಸಬೇಕು, ಇಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಲ್ಲಿ ಅನಾಹುತವನ್ನು ಕಡಿಮೆ ಮಾಡಬಹುದು’ ಎಂದು ಅವರು ಸಲಹೆ ನೀಡಿದ್ದಾರೆ. ಕರಿಕೆ ಮತ್ತು ಚೆಂಬು ಸುತ್ತಮುತ್ತ ಜೂನ್ 25 ರಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ 2.3, ಜೂನ್ 28ರಂದು ಬೆಳಿಗ್ಗೆ 7.45 ಗಂಟೆಗೆ 3.0, ಹಾಗೆಯೇ ಅಂದು ಸಂಜೆ 4.32 ಗಂಟೆ ವೇಳೆಯಲ್ಲಿ 1.8 ರಿಕ್ಟರ್ ಮಾಪಕದಲ್ಲಿ ಹಾಗೂ ಹಾರಂಗಿ ಜಲಾಶಯದಲ್ಲಿರುವ ಶಾಶ್ವತ ಭೂಕಂಪನ ಮಾಪನ ಕೇಂದ್ರದಲ್ಲಿ ಭೂಕಂಪನ
ದಾಖ ಲಾಗಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ.ಜಗದೀಶ್, ಜಿಲ್ಲಾ ವಿಪತ್ತು ಪರಿಣತರಾದ ಅನನ್ಯ ವಾಸುದೇವ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಭೂವಿಜ್ಞಾನಿ ಲಾಯಲ್ ಇತರರು ಭೂ ವೀಕ್ಷಣಾ
ತಂಡದಲ್ಲಿದ್ದರು.