ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಪಟ್ಟಣ ಗ್ರಾಮದ ಹೊಲದಲ್ಲಿದ್ದ ನಾಗರಹಾವು ಹಾಗೂ ಸುಮರು 40 ಮರಿಗಳನ್ನು ಕೂಡಿಗೆ ಸ್ನೇಕ್ ಗಫೂರ್ ಶನಿವಾರ ರಕ್ಷಣೆ ಮಾಡಿದ್ದಾರೆ.
ಹೊಲದಲ್ಲಿ ಬೆಳಿಗ್ಗೆ ಉದ್ದನೆಯ ನಾಗರಹಾವು ಹಾಗೂ ಅದರ ಮರಿಗಳನ್ನು ಕಂಡ ಗ್ರಾಮಸ್ಥರು ಕೂಡಲೇ ಸ್ನೇಕ್ ಗಫೂರ್ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಬಂದ ಅವರು ನಾಗರಹಾವು ಹಾಗೂ ಮರಿಗಳನ್ನು ಹಿಡಿದು ಸುರಕ್ಷಿತವಾಗಿ ಆನೆಕಾಡು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.