ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಜಪೇಟೆ: ಹೆದ್ದಾರಿಯಲ್ಲಿ ದರೋಡೆಗೆ ಸಂಚು, ತಂಡ ವಶಕ್ಕೆ

ವಿರಾಜಪೇಟೆ ಪೊಲೀಸರ ಕಾರ್ಯಾಚರಣೆ: ಮೂರು ರಾಜ್ಯದ ಆರೋಪಿಗಳ ಬಂಧನ
Last Updated 7 ಸೆಪ್ಟೆಂಬರ್ 2020, 2:21 IST
ಅಕ್ಷರ ಗಾತ್ರ

ವಿರಾಜಪೇಟೆ: ಕೊಡಗು- ಕೇರಳ ಅಂತರರಾಜ್ಯ ಹೆದ್ದಾರಿಯ ಪೆರುಂಬಾಡಿ ಸಮೀಪದಲ್ಲಿ ದರೋಡೆಗಾಗಿ ಹೊಂಚು ಹಾಕಿದ್ದ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಮೂಲದ 9 ಮಂದಿಯನ್ನು ಪೊಲೀಸರುಶನಿವಾರ ರಾತ್ರಿ ಬಂಧಿಸಿದ್ದಾರೆ.

ಹೆದ್ದಾರಿಯಲ್ಲಿ ದರೋಡೆಗಾಗಿ ಸಂಚು ನಡೆಸಿದ್ದಾರೆ ಎಂಬ ಕುರಿತು ಸುಳಿವು ಪಡೆದ ಇಲ್ಲಿನ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರನ್ನು ನೋಡಿದ ಕೂಡಲೇ ಹೆದ್ದಾರಿಯಲ್ಲಿದ್ದ ಈ 9 ಮಂದಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಆಗ ಪೊಲೀಸರು ಬೆನ್ನತ್ತಿ 9 ಮಂದಿಯನ್ನು ಬಂಧಿಸಿ ಎರಡು ಕಾರುಗಳನ್ನು ಹಾಗೂ ಎರಡು ಕಾರುಗಳಲ್ಲಿ ತಲಾ ಒಂದೊಂದು ಕೆ.ಜಿಯಷ್ಟು ಇಟ್ಟಿದ್ದ ಎರಡು ಪ್ಯಾಕೇಟ್‌ ಖಾರದ ಪುಡಿ, ಅರ್ಧ ಲೀಟರ್‌ನಷ್ಟು ಚಿನ್ನ ಕರಗಿಸಲು ಬಳಸುವ ಅಧಿಕ ಮೌಲ್ಯದ ಪಾದರಸ, 4 ಲಾಂಗ್‌ಗಳು, 2 ಮಚ್ಚುಗಳು, ಕಬ್ಬಿಣದ ಸಲಾಕೆಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಮೈಸೂರಿನ ವಾದಿರಾಜ್, ಕನಕಪುರದ ನಾರಾಯಣಸ್ವಾಮಿ, ಹಾಗೂ ಎಂ.ಸತೀಶ್, ಹೊಳೆನರಸೀಪುರ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಜಾನ್‌ಪೌಲ್, ಬೆಂಗಳೂರಿನ ಜ್ಞಾನೇಂದ್ರ ಪ್ರಸಾದ್, ಕೇರಳ ಕಣ್ಣಾನೂರಿನ ಕೆ.ಬಿ.ಅಭಿನವ್, ಕೇರಳ ಬಡಗರದ ವೈಷ್ಣವ್, ತಮಿಳುನಾಡಿನ ಹೊಸೂರಿನ ಎಚ್.ಸುರೇಶ್, ಹೊಸೂರಿನ ಪುರುಷೋತ್ತಮ್ ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

9 ಮಂದಿ ವಿರುದ್ಧ ಪೊಲೀಸರು ಅಂತರರಾಜ್ಯ ದರೋಡೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ತಂಡ ಎರಡು ಕಾರುಗಳಲ್ಲಿ ಮೈಸೂರು ಕಡೆಯಿಂದ ಬಂದಿರುವುದಾಗಿ ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಅಂತರರಾಜ್ಯ ಚೆಕ್‌ಪೋಸ್ಟ್‌ಗಳು ಸಂಚಾರಕ್ಕೆ ಮುಕ್ತವಾಗಿದ್ದು, ಇದನ್ನು ಬಂಡವಾಳ ಮಾಡಿಕೊಂಡು ಆರೋಪಿಗಳು ದರೋಡೆಗೆ ಹೊಂಚು ಹಾಕಿದ್ದರೆಂದು ಶಂಕಿಸಲಾಗಿದೆ.

ಇಲ್ಲಿನ ನಗರ ಠಾಣೆಯ ಎಸ್ಐ ಎಚ್.ಸಿ.ಭೋಜಪ್ಪ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿ ಎನ್.ಸಿ.ಲೋಕೇಶ್, ಮುಸ್ತಫಾ, ಸಂತೋಷ್, ಗಿರೀಶ್, ಮಧು, ಮುನಿರ್, ರಜನ್, ಲೋಹಿತ್, ಮಲ್ಲಿಕಾರ್ಜುನ ಹಾಗೂ ಯೋಗೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT