ಪೊನ್ನಂಪೇಟೆ (ಕೊಡಗು ಜಿಲ್ಲೆ): ಮುಗುಟಗೇರಿ ಗ್ರಾಮದ ಯೋಧ ಚೀರಂಡ ರಚನ್ ಬೋಪಣ್ಣ (22) ಅವರ ಮೃತದೇಹ, ನೇಣು ಬಿಗಿದ ಸ್ಥಿತಿಯಲ್ಲಿ ಪುಣೆಯ ವಸತಿಗೃಹದಲ್ಲಿ ಗುರುವಾರ ಪತ್ತೆಯಾಗಿದೆ.
ಸೇನೆಯಲ್ಲಿ ತರಬೇತಿ ಶಿಬಿರದಿಂದ ಭಾನುವಾರ ಔಟ್ಪಾಸ್ ಪಡೆದು ಹೊರಹೋಗಿದ್ದರು.
‘ದೇಹವು ಕೊಳೆತ ಸ್ಥಿತಿಯಲ್ಲಿದ್ದು, ಸ್ವಗ್ರಾಮಕ್ಕೆ ರವಾನಿಸಲು ತೊಂದರೆಯಾಗಿದೆ. ಜಬಲ್ಪುರದ ಸೇನಾ ಶಿಬಿರದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಐನಂಡ ಮಂದಣ್ಣಗೆ ಅಧಿಕಾರಿಗಳು ತಿಳಿಸಿದ್ದಾರೆ.