ಪ್ರಕರಣದ ಆರೋಪಿಗಳಾದ ಕೆ.ಯು.ಅನೀಶ್, ಕೆ.ಎ.ಮೂಸನ್ ಹಾಗೂ ಪಿ.ಎಂ.ನಜೀರ್ ಶಿಕ್ಷೆಗೆ ಒಳಗಾದವರು.5ನೇ ಆರೋಪಿ ಕೆ.ಎ.ಉಸ್ಮಾನ್ಗೆ ₹ 5 ಸಾವಿರ ದಂಡ ವಿಧಿಸಲಾಗಿದೆ. ಪ್ರಕರಣದಲ್ಲಿ 4ನೇ ಆರೋಪಿಯಾಗಿದ್ದ ಅಜ್ಮುದ್ದೀನ್ ಆರೋಪ ಮುಕ್ತಗೊಂಡಿದ್ದಾರೆ.
2014ರ ಸೆ.17ರಂದು ಪಟ್ಟಣದ ಗಡಿಯಾರ ಕಂಬದ ಬಳಿಯ ಹೋಟಲ್ವೊಂದರಲ್ಲಿ ಇಕ್ಬಾಲ್ ಹಸನ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಸಂದರ್ಭ ಹೋಟಲ್ನಲ್ಲಿದ್ದ ಚಂದ್ರಶೇಖರ್ ಕಾಲಿಗೂ ಗುಂಡು ತಗುಲಿತ್ತು. 5 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ವಕೀಲರಾಗಿ ನಾರಾಯಣ ಅವರು ವಾದಿಸಿದ್ದರು.