<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಪೂರ್ತಿ ಮಳೆಯಾಗಿದ್ದು, ಶುಕ್ರವಾರ ಜಿಟಿಜಿಟಿ ಮಳೆಯಾಯಿತು.</p> <p>ಈ ವರ್ಷ ಇದೇ ಮೊದಲ ಬಾರಿಗೆ ಹಾರಂಗಿ ಜಲಾಶಯದ ಒಳ ಹರಿವು 5 ಸಾವಿರ ಕ್ಯೂಸೆಕ್ ದಾಟಿದೆ. ಶುಕ್ರವಾರ 7,204 ಕ್ಯೂಸೆಕ್ನಷ್ಟು ನೀರು ಜಲಾಶಯಕ್ಕೆ ಹರಿದು ಬಂದಿದ್ದು, ಒಂದೇ ದಿನಕ್ಕೆ 3 ಅಡಿಗಳಷ್ಟು ನೀರು ಸಂಗ್ರಹವಾಯಿತು. 2,859 ಅಡಿ ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ ಸದ್ಯ 2,846.37 ಅಡಿಗಳಷ್ಟು ನೀರಿದೆ.</p> <p>6 ದಿನ ನಿರಂತರ ಮಳೆಯಿಂದ ಶಿಥಿಲ ಗೋಡೆಗಳು ಬೀಳುತ್ತಿವೆ. ಅಂಥ ಮನೆಗಳ ನಿವಾಸಿಗಳು ಆತಂಕ<br>ಗೊಂಡಿದ್ದಾರೆ. ವಿದ್ಯುತ್ ವ್ಯತ್ಯಯ ನಿರಂತರವಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ 10 ಸೆಂ.ಮೀ ಹಾಗೂ ಭಾಗಮಂಡಲದಲ್ಲಿ 8 ಸೆಂ.ಮೀನಷ್ಟು ಭಾರಿ ಮಳೆಯಾಗಿದೆ.</p>.<p>ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ತಡರಾತ್ರಿಯಿಂದ ಶುಕ್ರವಾರ ಮುಂಜಾನೆವರೆಗೆ ಜೋರು ಮಳೆಬಿದ್ದಿತು.</p>.<h2><strong>ಕಬಿನಿ ಭರ್ತಿಗೆ ನಾಲ್ಕಡಿ ಬಾಕಿ:</strong></h2>.<p>ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ ಇದೆ.</p>.<p>ಜಲಾಶಯ ಮಟ್ಟವು 2280 ಅಡಿ (ಗರಿಷ್ಟ ಮಟ್ಟ 2,284 ಅಡಿ) ಇದ್ದು, ಒಳಹರಿವು ಶುಕ್ರವಾರ ಸಂಜೆ 17ಸಾವಿರ ಕ್ಯೂಸೆಕ್ ಇತ್ತು. 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಒಡಲಿನಲ್ಲಿ 17 ಟಿಎಂಸಿ ಸಂಗ್ರಹವಾಗಿದೆ.</p>.<p>ಕೇರಳದ ವಯನಾಡ್ನಲ್ಲೂ ಮಳೆ ಪ್ರಮಾಣ ಹೆಚ್ಚಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 8ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಈ ಪ್ರಮಾಣ ಜಾಸ್ತಿಯಾಗಲಿರುವುದರಿಂದ, ನದಿಯ ಎರಡೂ ದಂಡೆಗಳಲ್ಲಿ ವಾಸಿಸುತ್ತಿರುವ ಜನ ಆಸ್ತಿ ಹಾಗೂ ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಾರ್ಯಪಾಲಕ ಎಂಜಿನಿಯರ್ ಎ.ಚಂದ್ರಶೇಖರ್ ಕೋರಿದ್ದಾರೆ.</p>.<h2> ತುಂಗಭದ್ರಾ ಒಳಹರಿವು 15 ಸಾವಿರ ಕ್ಯೂಸೆಕ್ಗೆ ಏರಿಕೆ</h2><p><strong>ಹೊಸಪೇಟೆ (ವಿಜಯನಗರ)</strong>: ಜಿಲ್ಲೆಯಲ್ಲಿ ಮಳೆ ಅಷ್ಟಾಗಿ ಇಲ್ಲದಿದ್ದರೂ ತುಂಗಭದ್ರಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ನಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಜಲಾಶಯದ ಒಳಹರಿವಿನ ಪ್ರಮಾಣ 15778 ಕ್ಯೂಸೆಕ್ಗೆ ಏರಿಕೆಯಾಗಿದೆ. ‘ಸದ್ಯ ಜಲಾಶಯದಲ್ಲಿ 13.67 ಟಿಎಂಸಿ ಅಡಿ ನೀರಿದೆ. ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ಗೇಟ್ ಸಿದ್ಧಪಡಿಸುವ ಕೆಲಸ ಬೇರೆ ಕಡೆ ಆರಂಭವಾಗಿದೆ. 20 ದಿನದೊಳಗೆ ಗೇಟ್ ಅಳವಡಿಸುವ ನಿರೀಕ್ಷೆ ಇದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ. ‘105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರು ಸಂಗ್ರಹವಾಗುವವರೆಗೆ ಗೇಟ್ ಕೆಲಸ ಮಾಡಬಹುದು. ಬಳಿಕ ಸಾಧ್ಯವಿಲ್ಲ. ಈ ಬಾರಿ ಬೇಗನೆ ಮುಂಗಾರು ಆರಂಭವಾಗಿರುವ ಕಾರಣ ಜೂನ್ ತಿಂಗಳ ಅಂತ್ಯದ ವೇಳೆಗೆ 40 ಟಿಎಂಸಿ ಅಡಿಗಿಂತ ಅಧಿಕ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ಅಣೆಕಟ್ಟೆಯ ಇತರ 32 ಗೇಟ್ಗಳನ್ನು ಬದಲಿಸುವ ಕಾರ್ಯ ಮುಂದಿನ ವರ್ಷ ನಡೆಯಬಹುದು ಎಂದು ಹೇಳಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಪೂರ್ತಿ ಮಳೆಯಾಗಿದ್ದು, ಶುಕ್ರವಾರ ಜಿಟಿಜಿಟಿ ಮಳೆಯಾಯಿತು.</p> <p>ಈ ವರ್ಷ ಇದೇ ಮೊದಲ ಬಾರಿಗೆ ಹಾರಂಗಿ ಜಲಾಶಯದ ಒಳ ಹರಿವು 5 ಸಾವಿರ ಕ್ಯೂಸೆಕ್ ದಾಟಿದೆ. ಶುಕ್ರವಾರ 7,204 ಕ್ಯೂಸೆಕ್ನಷ್ಟು ನೀರು ಜಲಾಶಯಕ್ಕೆ ಹರಿದು ಬಂದಿದ್ದು, ಒಂದೇ ದಿನಕ್ಕೆ 3 ಅಡಿಗಳಷ್ಟು ನೀರು ಸಂಗ್ರಹವಾಯಿತು. 2,859 ಅಡಿ ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ ಸದ್ಯ 2,846.37 ಅಡಿಗಳಷ್ಟು ನೀರಿದೆ.</p> <p>6 ದಿನ ನಿರಂತರ ಮಳೆಯಿಂದ ಶಿಥಿಲ ಗೋಡೆಗಳು ಬೀಳುತ್ತಿವೆ. ಅಂಥ ಮನೆಗಳ ನಿವಾಸಿಗಳು ಆತಂಕ<br>ಗೊಂಡಿದ್ದಾರೆ. ವಿದ್ಯುತ್ ವ್ಯತ್ಯಯ ನಿರಂತರವಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ 10 ಸೆಂ.ಮೀ ಹಾಗೂ ಭಾಗಮಂಡಲದಲ್ಲಿ 8 ಸೆಂ.ಮೀನಷ್ಟು ಭಾರಿ ಮಳೆಯಾಗಿದೆ.</p>.<p>ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ತಡರಾತ್ರಿಯಿಂದ ಶುಕ್ರವಾರ ಮುಂಜಾನೆವರೆಗೆ ಜೋರು ಮಳೆಬಿದ್ದಿತು.</p>.<h2><strong>ಕಬಿನಿ ಭರ್ತಿಗೆ ನಾಲ್ಕಡಿ ಬಾಕಿ:</strong></h2>.<p>ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ ಇದೆ.</p>.<p>ಜಲಾಶಯ ಮಟ್ಟವು 2280 ಅಡಿ (ಗರಿಷ್ಟ ಮಟ್ಟ 2,284 ಅಡಿ) ಇದ್ದು, ಒಳಹರಿವು ಶುಕ್ರವಾರ ಸಂಜೆ 17ಸಾವಿರ ಕ್ಯೂಸೆಕ್ ಇತ್ತು. 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಒಡಲಿನಲ್ಲಿ 17 ಟಿಎಂಸಿ ಸಂಗ್ರಹವಾಗಿದೆ.</p>.<p>ಕೇರಳದ ವಯನಾಡ್ನಲ್ಲೂ ಮಳೆ ಪ್ರಮಾಣ ಹೆಚ್ಚಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 8ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಈ ಪ್ರಮಾಣ ಜಾಸ್ತಿಯಾಗಲಿರುವುದರಿಂದ, ನದಿಯ ಎರಡೂ ದಂಡೆಗಳಲ್ಲಿ ವಾಸಿಸುತ್ತಿರುವ ಜನ ಆಸ್ತಿ ಹಾಗೂ ಜಾನುವಾರು ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಾರ್ಯಪಾಲಕ ಎಂಜಿನಿಯರ್ ಎ.ಚಂದ್ರಶೇಖರ್ ಕೋರಿದ್ದಾರೆ.</p>.<h2> ತುಂಗಭದ್ರಾ ಒಳಹರಿವು 15 ಸಾವಿರ ಕ್ಯೂಸೆಕ್ಗೆ ಏರಿಕೆ</h2><p><strong>ಹೊಸಪೇಟೆ (ವಿಜಯನಗರ)</strong>: ಜಿಲ್ಲೆಯಲ್ಲಿ ಮಳೆ ಅಷ್ಟಾಗಿ ಇಲ್ಲದಿದ್ದರೂ ತುಂಗಭದ್ರಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ನಷ್ಟು ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಜಲಾಶಯದ ಒಳಹರಿವಿನ ಪ್ರಮಾಣ 15778 ಕ್ಯೂಸೆಕ್ಗೆ ಏರಿಕೆಯಾಗಿದೆ. ‘ಸದ್ಯ ಜಲಾಶಯದಲ್ಲಿ 13.67 ಟಿಎಂಸಿ ಅಡಿ ನೀರಿದೆ. ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ಗೇಟ್ ಸಿದ್ಧಪಡಿಸುವ ಕೆಲಸ ಬೇರೆ ಕಡೆ ಆರಂಭವಾಗಿದೆ. 20 ದಿನದೊಳಗೆ ಗೇಟ್ ಅಳವಡಿಸುವ ನಿರೀಕ್ಷೆ ಇದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ. ‘105.78 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರು ಸಂಗ್ರಹವಾಗುವವರೆಗೆ ಗೇಟ್ ಕೆಲಸ ಮಾಡಬಹುದು. ಬಳಿಕ ಸಾಧ್ಯವಿಲ್ಲ. ಈ ಬಾರಿ ಬೇಗನೆ ಮುಂಗಾರು ಆರಂಭವಾಗಿರುವ ಕಾರಣ ಜೂನ್ ತಿಂಗಳ ಅಂತ್ಯದ ವೇಳೆಗೆ 40 ಟಿಎಂಸಿ ಅಡಿಗಿಂತ ಅಧಿಕ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ಅಣೆಕಟ್ಟೆಯ ಇತರ 32 ಗೇಟ್ಗಳನ್ನು ಬದಲಿಸುವ ಕಾರ್ಯ ಮುಂದಿನ ವರ್ಷ ನಡೆಯಬಹುದು ಎಂದು ಹೇಳಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>