ಇನ್ನೂ ತಾಯಿಯಿಂದ ಬೇರ್ಪಡದ ಅಂದಾಜು 6ರಿಂದ 8 ತಿಂಗಳು ಪ್ರಾಯದ ಗಂಡು ಹುಲಿ ನಾಗರಹೊಳೆ ಅರಣ್ಯದಂಚಿನಲ್ಲಿರುವ ಕಾಫಿ ತೋಟಕ್ಕೆ ತಾಯಿಯೊಂದಿಗೆ ಬಂದಿದೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಬಾಚೀರ ಕುಶಾಲಪ್ಪ ಅವರ ಕಾಫಿ ತೋಟದ ಬೇಲಿಗೆ ಹಂದಿ ಬೇಟೆಯಾಡಲು ಹಾಕಿದ್ದ ತಂತಿಯ ಉರುಳಿಗೆ ಸಿಕ್ಕಿಕೊಂಡಿದೆ. ಕೊರಳಿಗೆ ಬಿಗಿದ ಉರುಳನ್ನು ಬಿಡಿಸಿಕೊಳ್ಳಲಾಗದೆ ಹುಲಿ ಮರಿ ಭಾನುವಾರ ರಾತ್ರಿ ಸ್ಥಳದಲ್ಲಿಯೇ ಮೃತಪಟ್ಟಿದೆ.