ಗ್ರಾಮದ ಪಣಿ ಯರವರ ಅಯ್ಯಪ್ಪ (16) ವ್ಯಾಘ್ರನ ದಾಳಿಗೆ ಬಲಿಯಾದವರು.
ಕುಮಟೂರು ಗ್ರಾಮದ ಕೋಟ್ರಂಗಡ ಬಿದ್ದಪ್ಪ ಅವರ ಲೈನ್ಮನೆಯಲ್ಲಿ ತಂದೆ ಪಣಿ ಯರವರ ಬಸವ ಅವರು ಜೊತೆಗೆ ಅಯ್ಯಪ್ಪ ಅವರು ವಾಸವಿದ್ದರು. ಕೆಲಸ ಮುಗಿಸಿ ಕಾಫಿ ತೋಟದಲ್ಲಿ ತೆರಳುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದೆ. ಕೊಟ್ರಂಗಡ ಅಶ್ವಥ್ ಅವರ ತೋಟದಲ್ಲಿ ಮೃತದೇಹ ಪತ್ತೆಯಾಗಿದೆ. ಅಯ್ಯಪ್ಪ ಅವರ ತಲೆಯ ಭಾಗಕ್ಕೆ ಗಾಯವಾಗಿದೆ. ಹುಲಿ ಕೂದಲು ಮೃತದೇಹದಲ್ಲಿ ಮೇಲೆ ಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.