ಸೋಮವಾರಪೇಟೆ (ಕೊಡಗು): ಸಮೀಪದ ಮಲ್ಲಳ್ಳಿ ಜಲಪಾತ ವೀಕ್ಷಿಸಲು ಭಾನುವಾರ ಬಂದಿದ್ದ ಒಂದೇ ಕುಟುಂಬದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಾರುತಿ ಕಾರಿನಲ್ಲಿ 6 ಮಂದಿ ಜಲಪಾತ ವೀಕ್ಷಣೆಗೆ ಬಂದಿದ್ದರು. ಅದರಲ್ಲಿ ಸುಂಟಿಕೊಪ್ಪದ ರಾಮನ್ ಅವರ ಪುತ್ರ, ಬೆಂಗಳೂರಿನ ಇನ್ಫೊಸಿಸ್ ಉದ್ಯೋಗಿ ಶಶಿಕುಮಾರ್ (32) ಹಾಗೂ ರಾಮನ್ ಅವರ ಮೊಮ್ಮಗಳು, ಕುಶಾಲನಗರದ ಅಂತಿಮ ಪದವಿ ವಿದ್ಯಾರ್ಥಿನಿ ದಿವ್ಯಾ (20) ಮೃತಪಟ್ಟವರು.
ಜಲಪಾತದ ಹೊಂಡದ ಸಮೀಪ ಕುಳಿತ್ತಿದ್ದ ದಿವ್ಯಾ ಕಾಲು ಜಾರಿ ನೀರಿನಲ್ಲಿ ಮುಳುಗುತ್ತಿದ್ದರು. ಅವರನ್ನು ರಕ್ಷಿಸಲು ಹೋದ ಶಶಿಕುಮಾರ್ ಸಹ ನೀರಿನಲ್ಲಿ ಮುಳುಗಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.